<p><strong>ಬಾಗಲಕೋಟೆ</strong>: ಹಿಂದಿನ ವರ್ಷಗಳ ಬಾಕಿ ಪಾವತಿ ಮಾಡುವುದು. ಈ ವರ್ಷದ ಕಬ್ಬಿನ ಬಿಲ್ ಅನ್ನು 14 ದಿನಗಳಲ್ಲಿ ಪಾವತಿಸುವುದು. ರಿಕವರಿ ಆಧರಿಸದೇ ಎಲ್ಲ ರೈತರಿಗೆ ಪ್ರತಿ ಟನ್ಗೆ ಕಬ್ಬಿಗೆ ₹3,300 ಪಾವತಿಸಲು ಕಾರ್ಖಾನೆ ಮಾಲೀಕರು ಒಪ್ಪಿದ ಪರಿಣಾಮ ಮುಧೋಳದಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ರೈತರು ಶುಕ್ರವಾರ ಕೈಬಿಟ್ಟರು.</p><p>ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ರೈತರೊಂದಿಗೆ ಮಾತುಕತೆ ನಡೆಸಿದ ಪರಿಣಾಮ ಎರಡೂ ಕಡೆಯವರು ಮೇಲಿನ ಅಂಶಗಳಿಗೆ ಸಮ್ಮತಿ ಸೂಚಿಸಿದರು. ಪರಿಣಾಮ ಶುಕ್ರವಾರದಿಂದಲೇ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಯುವುದನ್ನು ಆರಂಭಿಸಿವೆ.</p><p>‘ಹಿಂದಿನ ವರ್ಷಗಳ ₹100 ಕೋಟಿ ಬಾಕಿ ಈಗಾಗಲೇ ಪಾವತಿಸಿದ್ದಾರೆ. ಉಳಿದ ₹25 ಕೋಟಿ ಬಾಕಿಯನ್ನು ಎರಡು ದಿನಗಳಲ್ಲಿ ಪಾವತಿಸುವುದಕ್ಕೆ, ರಿಕವರಿ ಎಷ್ಟೇ ಇರಲಿ, ಪ್ರತಿ ಟನ್ಗೆ ₹3,300 ನೀಡಲು ಒಪ್ಪಿಕೊಂಡಿರುವುದರಿಂದ ಪ್ರತಿಭಟನೆ ಹಿಂಪಡೆದಿದ್ದೇವೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ತಿಳಿಸಿದರು.</p><p>‘ರಿಕವರಿ ಆಧರಿಸಿ ಬೆಲೆ ನೀಡುವುದಕ್ಕೆ ನಮ್ಮ ವಿರೋಧವಿತ್ತು. ಆದ್ದರಿಂದ ಪ್ರತಿಭಟನೆಗೆ ಇಳಿದಿದ್ದೆವು. ಎಲ್ಲರೂ ಒಂದೇ ಬೆಲೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಬೆಂಕಿ ಹಚ್ಚಿದ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಇಷ್ಟು ವರ್ಷಗಳಲ್ಲಿ ಎಂದೂ ಇಂತಹ ಘಟನೆ ನಡೆದಿರಲಿಲ್ಲ’ ಎಂದರು.</p><p>‘ರೈತರು ಹಾಗೂ ಕಾರ್ಖಾನೆಯವರು ಒಪ್ಪಿಕೊಂಡಿರುವುದರಿಂದ ಸಮಸ್ಯೆ ಬಗೆಹರಿದಿದೆ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಆರಂಭವಾಗಿವೆ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಹಿಂದಿನ ವರ್ಷಗಳ ಬಾಕಿ ಪಾವತಿ ಮಾಡುವುದು. ಈ ವರ್ಷದ ಕಬ್ಬಿನ ಬಿಲ್ ಅನ್ನು 14 ದಿನಗಳಲ್ಲಿ ಪಾವತಿಸುವುದು. ರಿಕವರಿ ಆಧರಿಸದೇ ಎಲ್ಲ ರೈತರಿಗೆ ಪ್ರತಿ ಟನ್ಗೆ ಕಬ್ಬಿಗೆ ₹3,300 ಪಾವತಿಸಲು ಕಾರ್ಖಾನೆ ಮಾಲೀಕರು ಒಪ್ಪಿದ ಪರಿಣಾಮ ಮುಧೋಳದಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ರೈತರು ಶುಕ್ರವಾರ ಕೈಬಿಟ್ಟರು.</p><p>ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ರೈತರೊಂದಿಗೆ ಮಾತುಕತೆ ನಡೆಸಿದ ಪರಿಣಾಮ ಎರಡೂ ಕಡೆಯವರು ಮೇಲಿನ ಅಂಶಗಳಿಗೆ ಸಮ್ಮತಿ ಸೂಚಿಸಿದರು. ಪರಿಣಾಮ ಶುಕ್ರವಾರದಿಂದಲೇ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಯುವುದನ್ನು ಆರಂಭಿಸಿವೆ.</p><p>‘ಹಿಂದಿನ ವರ್ಷಗಳ ₹100 ಕೋಟಿ ಬಾಕಿ ಈಗಾಗಲೇ ಪಾವತಿಸಿದ್ದಾರೆ. ಉಳಿದ ₹25 ಕೋಟಿ ಬಾಕಿಯನ್ನು ಎರಡು ದಿನಗಳಲ್ಲಿ ಪಾವತಿಸುವುದಕ್ಕೆ, ರಿಕವರಿ ಎಷ್ಟೇ ಇರಲಿ, ಪ್ರತಿ ಟನ್ಗೆ ₹3,300 ನೀಡಲು ಒಪ್ಪಿಕೊಂಡಿರುವುದರಿಂದ ಪ್ರತಿಭಟನೆ ಹಿಂಪಡೆದಿದ್ದೇವೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ತಿಳಿಸಿದರು.</p><p>‘ರಿಕವರಿ ಆಧರಿಸಿ ಬೆಲೆ ನೀಡುವುದಕ್ಕೆ ನಮ್ಮ ವಿರೋಧವಿತ್ತು. ಆದ್ದರಿಂದ ಪ್ರತಿಭಟನೆಗೆ ಇಳಿದಿದ್ದೆವು. ಎಲ್ಲರೂ ಒಂದೇ ಬೆಲೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಬೆಂಕಿ ಹಚ್ಚಿದ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಇಷ್ಟು ವರ್ಷಗಳಲ್ಲಿ ಎಂದೂ ಇಂತಹ ಘಟನೆ ನಡೆದಿರಲಿಲ್ಲ’ ಎಂದರು.</p><p>‘ರೈತರು ಹಾಗೂ ಕಾರ್ಖಾನೆಯವರು ಒಪ್ಪಿಕೊಂಡಿರುವುದರಿಂದ ಸಮಸ್ಯೆ ಬಗೆಹರಿದಿದೆ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಆರಂಭವಾಗಿವೆ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>