ಗುರುವಾರ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಆಸ್ಪತ್ರೆ ಗೇಟ್ ಬಿದ್ದು ಮಕ್ಕಳಿಗೆ ಗಾಯ ಎಂಬ ಶೀರ್ಷಿಕೆಯ ಸುದ್ದಿಗೆ ಸ್ಪಂದಿಸಿ ಮಾತನಾಡಿದ ಅವರು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗೇಟ್ ದುರಸ್ತಿಗೊಳಿಸಿದ್ದಾರೆ. ಗೇಟ್ ಮಕ್ಕಳ ಮೇಲೆ ಸಂಪೂರ್ಣ ಕಳಚಿ ಬಿದ್ದಿಲ್ಲ. ಮಕ್ಕಳ ಮೇಲೆ ಬಿದ್ದಿದ್ದರೆ ದೊಡ್ಡ ಅನಾಹುತ ಆಗುತ್ತಿತ್ತು. ಹಾಗೆ ಆಗದೇ ಮಕ್ಕಳು ಗೇಟ್ ತೆರೆದಾಗ ದಿಢೀರ್ ಗೇಟ್ ಬಡಿದು ಇದರಿಂದ ಗಾಯವಾಗಿದೆ. ಗಾಯಗೊಂಡ ಮಕ್ಕಳಿಗೆ ಗುತ್ತಿಗೆದಾರರು ಚಿಕಿತ್ಸೆ ಕೊಡಿಸಿದ್ದಾರೆ. ಮುಂದೆ ಈ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.