<p>ರಾಂಪುರ: ಈ ವರ್ಷದ ಫಲಾಫಲ ಕುರಿತು ಸಮೀಪದ ಶಿರೂರ ಪಟ್ಟಣದಲ್ಲಿ ವಸಂತರಾವ್ ಕಡಿವಾಲ ಆಚಾರ್ಯರು ಭವಿಷ್ಯ ನುಡಿದಿದ್ದು, ಈ ಬಾರಿ ಉತ್ತಮ ಮಳೆ ಹಾಗೂ ಬೆಳೆ ಬರಲಿದ್ದು, ಎಲ್ಲವೂ ಸಮೃದ್ಧವಾಗಿದೆ ಎಂದಿದ್ದಾರೆ.</p>.<p>ಯುಗಾದಿ ಮರಿಪಾಡ್ಯೆ ದಿನವಾದ ಸೋಮವಾರ ಪಟ್ಟಣದ ಕಮ್ಮಾರ ಓಣಿಯ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಪಂಚಾಂಗ ಓದುವ ಮೂಲಕ ವರ್ಷದ ರಾಶಿಫಲ ಹೇಳಿದರು.</p>.<p>‘ರೈತರಿಗೆ ಸಕಾಲಕ್ಕೆ ಅನುಕೂಲವಾಗುವ ಮಳೆಗಳು ಉತ್ತಮವಾಗಿ ಆಗಲಿವೆ. ರೈತರು ಕೃಷಿಗೆ ಒತ್ತು ನೀಡಬೇಕು, ಒಳ್ಳೆಯ ಭವಿಷ್ಯವಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಜನರಲ್ಲಿ ಭಕ್ತಿ, ಭಾವ, ಧಾರ್ಮಿಕತೆ ಹೆಚ್ಚಾಗಲಿದೆ. ಸುಃಖ, ಶಾಂತಿ, ನೆಮ್ಮದಿಯ ಕಾಲ ಇದಾಗಲಿದೆ’ ಎಂದು ನುಡಿದರು.</p>.<p>ಯುಗಾದಿಯ ಈ ಭವಿಷ್ಯಕ್ಕೆ ಬಾಬುದಾರ ಕುಟುಂಬದವರು ಹಾಗೂ ಪಟ್ಟಣದ ಹಿರಿಯರನ್ನು ಬಾಜಾ, ಭಜಂತ್ರಿಯೊಂದಿಗೆ ಚಾವಡಿಗೆ ಕರೆತರಲಾಯಿತು. ಅಲ್ಲಿ ನೂತನ ವರ್ಷದ ಪಂಚಾಂಗಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಫಲಾಫಲ ತಿಳಿಸಲಾಯಿತು.</p>.<p>ಸುರೇಶ ದೇಸಾಯಿ, ಶ್ರೀನಿವಾಸ ಇನಾಂದಾರ, ತಿಪ್ಪಣ್ಣ ಪಟ್ಟಣಶೆಟ್ಟಿ, ಪ್ರಭಾಕರ ಕುಲಕರ್ಣಿ, ಯಂಕಪ್ಪ ಶಿಂಪಿ, ವೆಂಕಟರಾವ್ ಕುಲಕರ್ಣಿ, ಸಿದ್ದಯ್ಯ ಎಮ್ಮಿಮಠ, ಯರಗುರದಪ್ಪ ಹೊಸಮನಿ, ಶಿವಪ್ಪ ಅಚನೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಂಪುರ: ಈ ವರ್ಷದ ಫಲಾಫಲ ಕುರಿತು ಸಮೀಪದ ಶಿರೂರ ಪಟ್ಟಣದಲ್ಲಿ ವಸಂತರಾವ್ ಕಡಿವಾಲ ಆಚಾರ್ಯರು ಭವಿಷ್ಯ ನುಡಿದಿದ್ದು, ಈ ಬಾರಿ ಉತ್ತಮ ಮಳೆ ಹಾಗೂ ಬೆಳೆ ಬರಲಿದ್ದು, ಎಲ್ಲವೂ ಸಮೃದ್ಧವಾಗಿದೆ ಎಂದಿದ್ದಾರೆ.</p>.<p>ಯುಗಾದಿ ಮರಿಪಾಡ್ಯೆ ದಿನವಾದ ಸೋಮವಾರ ಪಟ್ಟಣದ ಕಮ್ಮಾರ ಓಣಿಯ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಪಂಚಾಂಗ ಓದುವ ಮೂಲಕ ವರ್ಷದ ರಾಶಿಫಲ ಹೇಳಿದರು.</p>.<p>‘ರೈತರಿಗೆ ಸಕಾಲಕ್ಕೆ ಅನುಕೂಲವಾಗುವ ಮಳೆಗಳು ಉತ್ತಮವಾಗಿ ಆಗಲಿವೆ. ರೈತರು ಕೃಷಿಗೆ ಒತ್ತು ನೀಡಬೇಕು, ಒಳ್ಳೆಯ ಭವಿಷ್ಯವಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಜನರಲ್ಲಿ ಭಕ್ತಿ, ಭಾವ, ಧಾರ್ಮಿಕತೆ ಹೆಚ್ಚಾಗಲಿದೆ. ಸುಃಖ, ಶಾಂತಿ, ನೆಮ್ಮದಿಯ ಕಾಲ ಇದಾಗಲಿದೆ’ ಎಂದು ನುಡಿದರು.</p>.<p>ಯುಗಾದಿಯ ಈ ಭವಿಷ್ಯಕ್ಕೆ ಬಾಬುದಾರ ಕುಟುಂಬದವರು ಹಾಗೂ ಪಟ್ಟಣದ ಹಿರಿಯರನ್ನು ಬಾಜಾ, ಭಜಂತ್ರಿಯೊಂದಿಗೆ ಚಾವಡಿಗೆ ಕರೆತರಲಾಯಿತು. ಅಲ್ಲಿ ನೂತನ ವರ್ಷದ ಪಂಚಾಂಗಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಫಲಾಫಲ ತಿಳಿಸಲಾಯಿತು.</p>.<p>ಸುರೇಶ ದೇಸಾಯಿ, ಶ್ರೀನಿವಾಸ ಇನಾಂದಾರ, ತಿಪ್ಪಣ್ಣ ಪಟ್ಟಣಶೆಟ್ಟಿ, ಪ್ರಭಾಕರ ಕುಲಕರ್ಣಿ, ಯಂಕಪ್ಪ ಶಿಂಪಿ, ವೆಂಕಟರಾವ್ ಕುಲಕರ್ಣಿ, ಸಿದ್ದಯ್ಯ ಎಮ್ಮಿಮಠ, ಯರಗುರದಪ್ಪ ಹೊಸಮನಿ, ಶಿವಪ್ಪ ಅಚನೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>