<p><strong>ಬಾಗಲಕೋಟೆ</strong>: ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಜನ್ಮ ದಿನ ಅಂಗವಾಗಿ ಅವರ ಉತ್ತಮ ಸಂದೇಶವುಳ್ಳ ಪುಸ್ತಕಗಳ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವೈಭವ ಕ್ರಿಯೇಷನ್ಸ್ನ ಘನಶ್ಯಾಮ್ ಭಾಂಡಗೆ ಹೇಳಿದರು.</p>.<p>ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹50 ಸಾವಿರ ವೆಚ್ಚದಲ್ಲಿ ಪುಸ್ತಕಗಳನ್ನು ಹಾಗೂ ಪೆನ್ ಡ್ರೈವ್ನಲ್ಲಿ ಅವರ ಸಂದೇಶವನ್ನು ಮನೆ, ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು’ ಎಂದರು.</p>.<p>‘ಸಿದ್ದೇಶ್ವರ ಸ್ವಾಮೀಜಿ ಹೆಸರಿನಲ್ಲಿ ₹1 ಲಕ್ಷ ಮೊತ್ತದ ಪ್ರಶಸ್ತಿ ನೀಡಲು ಯೋಜಿಸಲಾಗಿತ್ತು. ಅವರ ಹಲವಾರು ಭಕ್ತರು ಪ್ರಶಸ್ತಿ ನೀಡುವುದು ಬೇಡ ಎಂದು ಸೂಚಿಸಿದ ಮೇಲೆ, ಅವರ ಸಂದೇಶಗಳನ್ನು ಜನರಿಗೆ ತಲುಪಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.</p>.<p>‘ಪ್ರಶಸ್ತಿ ಮೊತ್ತದ ಜತೆಗೆ ಕಾರ್ಯಕ್ರಮಕ್ಕೆ ತಗುಲಬಹುದಾಗಿದ್ದ ₹50 ಸಾವಿರ ಸೇರಿಸಿ, ₹1.5 ಲಕ್ಷದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>‘ತಲಾ ₹25 ಸಾವಿರ ವೆಚ್ಚದಲ್ಲಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪೌರ ಕಾರ್ಮಿಕರ ಮಕ್ಕಳಿಗೆ, ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಅಂಗವಿಕಲ ಮಕ್ಕಳಿಗೆ ಹಾಗೂ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು’ ಎಂದು ಹೇಳಿದರು.</p>.<p>₹25 ಸಾವಿರ ವೆಚ್ಚದಲ್ಲಿ ಅವಶ್ಯವಿರುವ, ಸಂಕಷ್ಟದಲ್ಲಿರುವ ಯೋಧರು ಹಾಗೂ ಅವರ ಕುಟುಂಬದವರಿಗೆ ನೆರವು ನೀಡಲಾಗುವುದು ಎಂದರು.</p>.<p>ಸಿದ್ದು ಉದುಪುಡಿ, ತಮ್ಮಣ್ಣ ಗೌಳಿ, ಉಮೇಶ ಬರಗುಂಡಿ, ಮಹಬೂಬ್ ತೊಣಶ್ಯಾಳ, ಕಲ್ಮೇಶ ಕೋಟಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಜನ್ಮ ದಿನ ಅಂಗವಾಗಿ ಅವರ ಉತ್ತಮ ಸಂದೇಶವುಳ್ಳ ಪುಸ್ತಕಗಳ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವೈಭವ ಕ್ರಿಯೇಷನ್ಸ್ನ ಘನಶ್ಯಾಮ್ ಭಾಂಡಗೆ ಹೇಳಿದರು.</p>.<p>ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹50 ಸಾವಿರ ವೆಚ್ಚದಲ್ಲಿ ಪುಸ್ತಕಗಳನ್ನು ಹಾಗೂ ಪೆನ್ ಡ್ರೈವ್ನಲ್ಲಿ ಅವರ ಸಂದೇಶವನ್ನು ಮನೆ, ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು’ ಎಂದರು.</p>.<p>‘ಸಿದ್ದೇಶ್ವರ ಸ್ವಾಮೀಜಿ ಹೆಸರಿನಲ್ಲಿ ₹1 ಲಕ್ಷ ಮೊತ್ತದ ಪ್ರಶಸ್ತಿ ನೀಡಲು ಯೋಜಿಸಲಾಗಿತ್ತು. ಅವರ ಹಲವಾರು ಭಕ್ತರು ಪ್ರಶಸ್ತಿ ನೀಡುವುದು ಬೇಡ ಎಂದು ಸೂಚಿಸಿದ ಮೇಲೆ, ಅವರ ಸಂದೇಶಗಳನ್ನು ಜನರಿಗೆ ತಲುಪಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.</p>.<p>‘ಪ್ರಶಸ್ತಿ ಮೊತ್ತದ ಜತೆಗೆ ಕಾರ್ಯಕ್ರಮಕ್ಕೆ ತಗುಲಬಹುದಾಗಿದ್ದ ₹50 ಸಾವಿರ ಸೇರಿಸಿ, ₹1.5 ಲಕ್ಷದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>‘ತಲಾ ₹25 ಸಾವಿರ ವೆಚ್ಚದಲ್ಲಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪೌರ ಕಾರ್ಮಿಕರ ಮಕ್ಕಳಿಗೆ, ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಅಂಗವಿಕಲ ಮಕ್ಕಳಿಗೆ ಹಾಗೂ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು’ ಎಂದು ಹೇಳಿದರು.</p>.<p>₹25 ಸಾವಿರ ವೆಚ್ಚದಲ್ಲಿ ಅವಶ್ಯವಿರುವ, ಸಂಕಷ್ಟದಲ್ಲಿರುವ ಯೋಧರು ಹಾಗೂ ಅವರ ಕುಟುಂಬದವರಿಗೆ ನೆರವು ನೀಡಲಾಗುವುದು ಎಂದರು.</p>.<p>ಸಿದ್ದು ಉದುಪುಡಿ, ತಮ್ಮಣ್ಣ ಗೌಳಿ, ಉಮೇಶ ಬರಗುಂಡಿ, ಮಹಬೂಬ್ ತೊಣಶ್ಯಾಳ, ಕಲ್ಮೇಶ ಕೋಟಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>