<p><strong>ಬೀಳಗಿ: </strong>ಎಲ್ಲರೂ ಶ್ರೀಮಂತರಾಗಿ ಹುಟ್ಟುವುದು ಅಸಾಧ್ಯ. ಬಡವರಾಗಿ ಹುಟ್ಟುವುದು ತಪ್ಪಲ್ಲ. ಆದರೆ ಕಷ್ಟಪಟ್ಟು, ಪ್ರಾಮಾಣಿಕವಾಗಿ ದುಡಿದು ಸಿರಿವಂತನಾಗಬೇಕೆಂಬ ಛಲ ಹೊಂದದೇ ಇರು ವುದು ತಪ್ಪು ಎಂದು ಸಚಿವ ಮುರುಗೇಶ ನಿರಾಣಿ ಅಭಿಪ್ರಾಯಪಟ್ಟರು.<br /> <br /> ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್.ಚಟುವಟಿಕೆಗಳ ಉದ್ಘಾಟನೆ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> ಇನ್ಫೋಸಿಸ್ ಮುಖಾಂತರ ಲಕ್ಷಾಂತರ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದ ನಾರಾ ಯಣಮೂರ್ತಿ ದಂಪತಿ, ಸೋಮಯ್ಯ ಸಕ್ಕರೆ ಕಾರ್ಖಾನೆಯ ಮಾಲೀಕ ಸೋಮಯ್ಯ, ಸಕ್ಕರೆ ಉದ್ದಿಮೆಯಲ್ಲಿ ವಿಶ್ವದ ಗಮನ ಸೆಳೆದ ವಿಜಯಾ ಮರಕುಂಬಿ ಮುಂತಾದವರು ತೀರ ಬಡತನದಿಂದ ಬಂದವರು. <br /> <br /> ಆದರೆ ಅವರೆಲ್ಲರೂ ಪ್ರಗತಿ ಸಾಧಿಸಲು, ವಿಶ್ವವೇ ಅವರತ್ತ ಹೊರಳಿ ನೋಡುವಂತಾಗಲು ಅವರ ಛಲವೇ ಕಾರಣ ಎಂದು ಅವರು ಹೇಳಿದರು.ಕಷ್ಟಪಟ್ಟು ತಾವು ಕೂಡ ಮೇಲೆ ಬಂದಿದ್ದನ್ನು ಅವರು ವಿದ್ಯಾರ್ಥಿಗಳ ಮುಂದೆ ಬಿಡಿಸಿಟ್ಟರು.<br /> <br /> ಭಾವಿ ಬದುಕನ್ನು ರೂಪಿಸುವುದು ಕೇವಲ ಪದವಿ ಶಿಕ್ಷಣವಲ್ಲ. ಗುಣಾತ್ಮಕ ಶಿಕ್ಷಣ ಹಾಗೂ ಛಲ ಮಾತ್ರದಿಂದ ಸಾಧ್ಯ ಎಂದು ಅವರು ಹೇಳಿದರು.`ಬಿಳಿಗಿರಿ ಸಿರಿ~ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿದ ಸಾಹಿತಿ ಸಿದ್ದು ದಿವಾಣ, ಪುಸ್ತಕಗಳು ಓದುಗನಲ್ಲಿರುವ ಜಡತ್ವ ಕಳೆದು ಆತನಲ್ಲಿ ಜನ ಮುಖಿಯಾಗಿ, ಸಮಾಜಮುಖಿಯಾಗಿ ಚಿಂತಿಸು ವ ಗುಣಗಳನ್ನು ರೂಪಿಸುತ್ತವೆ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಚ್.ತೆಕ್ಕೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.<br /> ಇಪ್ಪತ್ತು ವರ್ಷಗಳ ಹಿಂದೆಯೇ ಉತ್ತರ ಕರ್ನಾಟಕದಲ್ಲಿ ಪ್ರಾರಂಭಗೊಂಡ ಪ್ರಪ್ರಥಮ ಸರ ಕಾರಿ ಪದವಿ ಕಾಲೇಜು ಇದಾಗಿದೆ ಎಂದು ಹೇಳಿ ದರು. ಜೊತೆಗೆ ಕಾಲೇಜಿನ ಕುಂದುಕೊರತೆ ಹಾಗೂ ಅವಶ್ಯಕತೆಗಳನ್ನು ಸಚಿವರ ಗಮನಕ್ಕೆ ತಂದರು.<br /> <br /> ಎಪಿಎಂಸಿ ಉಪಾಧ್ಯಕ್ಷ ಅನಿಲ ದೇಶಪಾಂಡೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮಹಾಂತೇಶ ಅಂಗಡಿ ಮುಖ್ಯ ಅತಿಥಿಗಳಾಗಿದ್ದರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಡಾ.ಬಿ.ಎಸ್.ಸಿಂಗೆ ಉಪಸ್ಥಿತರಿದ್ದರು.<br /> <br /> ರೂ.2 ಲಕ್ಷ ಠೇವಣಿ: ಸಚಿವ ಮುರುಗೇಶ ನಿರಾಣಿಯವರು ರೂ. 2 ಲಕ್ಷ ಕಾಲೇಜಿನ ಸ್ಥಿರನಿಧಿಯಲ್ಲಿಟ್ಟು ಬರುವ ಬಡ್ಡಿಯಿಂದ ಪ್ರತಿ ವಿಭಾಗದಿಂದ ಅಂತಿಮ ವರ್ಷದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಕೊಡುವದಾಗಿ ಹೇಳಿದರು.<br /> <br /> ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ಸಚಿವ ಮುರುಗೇಶ ನಿರಾಣಿ ಹಾಗೂ ಸದಸ್ಯರುಗಳನ್ನು ಸತ್ಕರಿಸಲಾಯಿತು.ಡಿ.ಎಂ.ಬಾಗವಾನ್ ಸ್ವಾಗತಿಸಿದರು. ಎಸ್.ಎಂ.ರಾಮಸಾಲಿ ವಂದಿಸಿದರು. ಪ್ರೊ. ಸಿ.ಎಂ. ನಾಯ್ಕ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಳಗಿ: </strong>ಎಲ್ಲರೂ ಶ್ರೀಮಂತರಾಗಿ ಹುಟ್ಟುವುದು ಅಸಾಧ್ಯ. ಬಡವರಾಗಿ ಹುಟ್ಟುವುದು ತಪ್ಪಲ್ಲ. ಆದರೆ ಕಷ್ಟಪಟ್ಟು, ಪ್ರಾಮಾಣಿಕವಾಗಿ ದುಡಿದು ಸಿರಿವಂತನಾಗಬೇಕೆಂಬ ಛಲ ಹೊಂದದೇ ಇರು ವುದು ತಪ್ಪು ಎಂದು ಸಚಿವ ಮುರುಗೇಶ ನಿರಾಣಿ ಅಭಿಪ್ರಾಯಪಟ್ಟರು.<br /> <br /> ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್.ಚಟುವಟಿಕೆಗಳ ಉದ್ಘಾಟನೆ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> ಇನ್ಫೋಸಿಸ್ ಮುಖಾಂತರ ಲಕ್ಷಾಂತರ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದ ನಾರಾ ಯಣಮೂರ್ತಿ ದಂಪತಿ, ಸೋಮಯ್ಯ ಸಕ್ಕರೆ ಕಾರ್ಖಾನೆಯ ಮಾಲೀಕ ಸೋಮಯ್ಯ, ಸಕ್ಕರೆ ಉದ್ದಿಮೆಯಲ್ಲಿ ವಿಶ್ವದ ಗಮನ ಸೆಳೆದ ವಿಜಯಾ ಮರಕುಂಬಿ ಮುಂತಾದವರು ತೀರ ಬಡತನದಿಂದ ಬಂದವರು. <br /> <br /> ಆದರೆ ಅವರೆಲ್ಲರೂ ಪ್ರಗತಿ ಸಾಧಿಸಲು, ವಿಶ್ವವೇ ಅವರತ್ತ ಹೊರಳಿ ನೋಡುವಂತಾಗಲು ಅವರ ಛಲವೇ ಕಾರಣ ಎಂದು ಅವರು ಹೇಳಿದರು.ಕಷ್ಟಪಟ್ಟು ತಾವು ಕೂಡ ಮೇಲೆ ಬಂದಿದ್ದನ್ನು ಅವರು ವಿದ್ಯಾರ್ಥಿಗಳ ಮುಂದೆ ಬಿಡಿಸಿಟ್ಟರು.<br /> <br /> ಭಾವಿ ಬದುಕನ್ನು ರೂಪಿಸುವುದು ಕೇವಲ ಪದವಿ ಶಿಕ್ಷಣವಲ್ಲ. ಗುಣಾತ್ಮಕ ಶಿಕ್ಷಣ ಹಾಗೂ ಛಲ ಮಾತ್ರದಿಂದ ಸಾಧ್ಯ ಎಂದು ಅವರು ಹೇಳಿದರು.`ಬಿಳಿಗಿರಿ ಸಿರಿ~ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿದ ಸಾಹಿತಿ ಸಿದ್ದು ದಿವಾಣ, ಪುಸ್ತಕಗಳು ಓದುಗನಲ್ಲಿರುವ ಜಡತ್ವ ಕಳೆದು ಆತನಲ್ಲಿ ಜನ ಮುಖಿಯಾಗಿ, ಸಮಾಜಮುಖಿಯಾಗಿ ಚಿಂತಿಸು ವ ಗುಣಗಳನ್ನು ರೂಪಿಸುತ್ತವೆ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಚ್.ತೆಕ್ಕೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.<br /> ಇಪ್ಪತ್ತು ವರ್ಷಗಳ ಹಿಂದೆಯೇ ಉತ್ತರ ಕರ್ನಾಟಕದಲ್ಲಿ ಪ್ರಾರಂಭಗೊಂಡ ಪ್ರಪ್ರಥಮ ಸರ ಕಾರಿ ಪದವಿ ಕಾಲೇಜು ಇದಾಗಿದೆ ಎಂದು ಹೇಳಿ ದರು. ಜೊತೆಗೆ ಕಾಲೇಜಿನ ಕುಂದುಕೊರತೆ ಹಾಗೂ ಅವಶ್ಯಕತೆಗಳನ್ನು ಸಚಿವರ ಗಮನಕ್ಕೆ ತಂದರು.<br /> <br /> ಎಪಿಎಂಸಿ ಉಪಾಧ್ಯಕ್ಷ ಅನಿಲ ದೇಶಪಾಂಡೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮಹಾಂತೇಶ ಅಂಗಡಿ ಮುಖ್ಯ ಅತಿಥಿಗಳಾಗಿದ್ದರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಡಾ.ಬಿ.ಎಸ್.ಸಿಂಗೆ ಉಪಸ್ಥಿತರಿದ್ದರು.<br /> <br /> ರೂ.2 ಲಕ್ಷ ಠೇವಣಿ: ಸಚಿವ ಮುರುಗೇಶ ನಿರಾಣಿಯವರು ರೂ. 2 ಲಕ್ಷ ಕಾಲೇಜಿನ ಸ್ಥಿರನಿಧಿಯಲ್ಲಿಟ್ಟು ಬರುವ ಬಡ್ಡಿಯಿಂದ ಪ್ರತಿ ವಿಭಾಗದಿಂದ ಅಂತಿಮ ವರ್ಷದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಕೊಡುವದಾಗಿ ಹೇಳಿದರು.<br /> <br /> ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ಸಚಿವ ಮುರುಗೇಶ ನಿರಾಣಿ ಹಾಗೂ ಸದಸ್ಯರುಗಳನ್ನು ಸತ್ಕರಿಸಲಾಯಿತು.ಡಿ.ಎಂ.ಬಾಗವಾನ್ ಸ್ವಾಗತಿಸಿದರು. ಎಸ್.ಎಂ.ರಾಮಸಾಲಿ ವಂದಿಸಿದರು. ಪ್ರೊ. ಸಿ.ಎಂ. ನಾಯ್ಕ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>