<p>ಕೆರೂರ: ಜಾನಪದ ಸಾಹಿತ್ಯದಲ್ಲಿ ಗ್ರಾಮೀಣ ಪರಿಸರ, ಬದುಕು ಹಾಗೂ ನೋವು ನಲಿವು, ಕಂಡುಂಡ ಆಸಕ್ತಿದಾ ಯಕ ಅನುಭವಗಳು ಅಡಗಿದೆ. ಈ ಸಾಹಿತ್ಯದಲ್ಲಿ ನೈಜವಾದ ಸೃಜನಶೀಲತೆ ಮನೆ ಮಾಡಿದೆ ಎಂದು ಕನ್ನಡ ಕಲಾ ಶಿಕ್ಷಕ ಬಿ.ವಿ. ಮುದ್ಲಾಪೂರ ಹೇಳಿದರು.<br /> <br /> ಪಟ್ಟಣದ ವಿದ್ಯಾವರ್ಧಕ ಸಂಘದ ಅ.ರಾ. ಹಿರೇಮಠ ಪ್ರೌಢಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋ ಗದಲ್ಲಿ ನಡೆಸಿದ `ವಿದ್ಯಾರ್ಥಿಗಳಿಗಾಗಿ ಸಂವಾದ~ ಕಾರ್ಯಕ್ರಮದಲ್ಲಿ ಜಾನಪದ ಕಲಾ ಪ್ರಕಾರ ಕುರಿತು ಮಾತನಾಡಿದರು.<br /> <br /> ಪ್ರತಿಯೊಬ್ಬ ವಿದ್ಯಾರ್ಥಿ ಸಾಹಿತ್ಯದ ಅಭಿರುಚಿ ರೂಢಿಸಿಕೊಂಡರೆ ಅವರಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಗೊಳ್ಳುತ್ತದೆ ಎಂದರು.<br /> <br /> ನಂತರ ಪೌರಾಣಿಕ ಯುಗದ ಬಬ್ರುವಾಹನ, ಬಲ ಭೀಮ ಹಾಗೂ ಅರ್ಜುನರ ಪಾತ್ರವನ್ನು ಅಭಿನಯಿಸುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸುವಲ್ಲಿ ಯಶಸ್ವಿ ಯಾದರು.<br /> <br /> ವಿದ್ಯಾರ್ಥಿನಿ ಶ್ರುತಿ ಕುದರಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂವಾದದಲ್ಲಿ ಸಹಾಯಕರಾಗಿ ವಸಂತಾ ಸುಟಗಲ್, ಸೀಮಾ ಪೂಜಾರ, ಹೀನಾ ಭಾಂಗಿ ವಿದ್ಯಾರ್ಥಿ ವಲಯದಿಂದ ಜಾನಪದ ಸಾಹಿತ್ಯ ಕುರಿತು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.<br /> <br /> ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಚಂದ್ರಶೇಖರ ತಾಳಿಕೋಟೆ, ಮುಖ್ಯ ಶಿಕ್ಷಕ ವೈ.ಡಿ. ರಡ್ಡೇರ, ಸಿ.ಎಸ್. ನಾಗನೂರ, ಎನ್.ಬಿ. ಬಾಗೇವಾಡಿ, ಜಗದೀಶ ಬಾರಕೇರ ಮುಂತಾದ ಶಿಕ್ಷಕ ವರ್ಗ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆರೂರ: ಜಾನಪದ ಸಾಹಿತ್ಯದಲ್ಲಿ ಗ್ರಾಮೀಣ ಪರಿಸರ, ಬದುಕು ಹಾಗೂ ನೋವು ನಲಿವು, ಕಂಡುಂಡ ಆಸಕ್ತಿದಾ ಯಕ ಅನುಭವಗಳು ಅಡಗಿದೆ. ಈ ಸಾಹಿತ್ಯದಲ್ಲಿ ನೈಜವಾದ ಸೃಜನಶೀಲತೆ ಮನೆ ಮಾಡಿದೆ ಎಂದು ಕನ್ನಡ ಕಲಾ ಶಿಕ್ಷಕ ಬಿ.ವಿ. ಮುದ್ಲಾಪೂರ ಹೇಳಿದರು.<br /> <br /> ಪಟ್ಟಣದ ವಿದ್ಯಾವರ್ಧಕ ಸಂಘದ ಅ.ರಾ. ಹಿರೇಮಠ ಪ್ರೌಢಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋ ಗದಲ್ಲಿ ನಡೆಸಿದ `ವಿದ್ಯಾರ್ಥಿಗಳಿಗಾಗಿ ಸಂವಾದ~ ಕಾರ್ಯಕ್ರಮದಲ್ಲಿ ಜಾನಪದ ಕಲಾ ಪ್ರಕಾರ ಕುರಿತು ಮಾತನಾಡಿದರು.<br /> <br /> ಪ್ರತಿಯೊಬ್ಬ ವಿದ್ಯಾರ್ಥಿ ಸಾಹಿತ್ಯದ ಅಭಿರುಚಿ ರೂಢಿಸಿಕೊಂಡರೆ ಅವರಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಗೊಳ್ಳುತ್ತದೆ ಎಂದರು.<br /> <br /> ನಂತರ ಪೌರಾಣಿಕ ಯುಗದ ಬಬ್ರುವಾಹನ, ಬಲ ಭೀಮ ಹಾಗೂ ಅರ್ಜುನರ ಪಾತ್ರವನ್ನು ಅಭಿನಯಿಸುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸುವಲ್ಲಿ ಯಶಸ್ವಿ ಯಾದರು.<br /> <br /> ವಿದ್ಯಾರ್ಥಿನಿ ಶ್ರುತಿ ಕುದರಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂವಾದದಲ್ಲಿ ಸಹಾಯಕರಾಗಿ ವಸಂತಾ ಸುಟಗಲ್, ಸೀಮಾ ಪೂಜಾರ, ಹೀನಾ ಭಾಂಗಿ ವಿದ್ಯಾರ್ಥಿ ವಲಯದಿಂದ ಜಾನಪದ ಸಾಹಿತ್ಯ ಕುರಿತು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.<br /> <br /> ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಚಂದ್ರಶೇಖರ ತಾಳಿಕೋಟೆ, ಮುಖ್ಯ ಶಿಕ್ಷಕ ವೈ.ಡಿ. ರಡ್ಡೇರ, ಸಿ.ಎಸ್. ನಾಗನೂರ, ಎನ್.ಬಿ. ಬಾಗೇವಾಡಿ, ಜಗದೀಶ ಬಾರಕೇರ ಮುಂತಾದ ಶಿಕ್ಷಕ ವರ್ಗ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>