ಕೂಡಲೇ ಪಟ್ಟಣ ಪಂಚಾಯಿತಿ ಸಂಬಂಧಪಟ್ಟ ನಿವೇಶನ ಮಾಲೀಕರಿಗೆ ತಿಳಿಸಬೇಕು ಅಥವಾ ತಾವೇ ಸ್ವಚ್ಛಗೊಳಿಸಬೇಕು ಎಂದು ತಾಲ್ಲೂಕು ಪ್ರಗತಿಪರ ಚಿಂತಕರ ವೇದಿಕೆ ಗೌರವಾಧ್ಯಕ್ಷ ಎಸ್.ಜಿ.ಪರೂತಿ ಮತ್ತು ಅಧ್ಯಕ್ಷ ಮಹೇಶ ತಿಪ್ಪಶೆಟ್ಟಿ ಆಗ್ರಹಿಸಿದ್ದಾರೆ.
ನವನಗರ, ಮಹಾಂತನಗರ, ವಿದ್ಯಾನಗರ ಮುಂತಾದ ಕಡೆಗಳಲ್ಲಿ ಜಾಲಿಕಂಟಿ ಮರೆಯಲ್ಲಿ ಜನರು ಶೌಚ ಮಾಡುತ್ತಿದ್ದಾರೆ. ಯಥೇಚ್ಛವಾಗಿ ಕಸ ಚೆಲ್ಲುತ್ತಾರೆ. ಅದರಂತೆ ಅಲ್ಲಲ್ಲಿ ಇರುವ ಸರ್ಕಾರಿ ಮತ್ತು ಖಾಸಗಿ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳು ಜಾಲಿಯ ಮರೆಯಲ್ಲಿ ಹಾಗೂ ಸಾರ್ವಜನಿಕ ರಸ್ತೆ ಕಟ್ಟಡಗಳ ಸುತ್ತ ಶೌಚ ಮಾಡುತ್ತಿದ್ದಾರೆ.