<p><strong>ಬಳ್ಳಾರಿ</strong>: 2024–25ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಬುಧವಾರ ಬಿಡುಗಡೆ ಮಾಡಿದ್ದು, ಮೂರು ವಿಭಾಗಗಳಲ್ಲಿ 12 ಮಂದಿಗೆ ಪ್ರಶಸ್ತಿ ದೊರೆತಿದೆ. </p>.<p>ಕಿರಿಯ ಪ್ರಾಥಮಿಕ ಶಾಲೆ: ಬಳ್ಳಾರಿಯ ಬಾಲಯ್ಯ ಕ್ಯಾಂಪ್ ಶಾಲೆಯ ಮಹಾಂತೇಶ್ ಮೇಟಿ, ಕುರುಗೋಡಿನ ಕರಿಮಾರೆಮ್ಮ ಕಾಲೋನಿ ಶಾಲೆಯ ಹೊನ್ನೂರ್ ಬಿ, ಸಂಡೂರಿನ ಆಶ್ರಯ ಕಾಲೋನಿ ಸೋವೇನಹಳ್ಳಿ ಶಾಲೆಯ ಕುಮಾರಸ್ವಾಮಿ, ಸಿರುಗುಪ್ಪದ ದೇವಲಾಪುರ ಶಾಲೆಯ ಫಕ್ರುದ್ದೀನ್ ಸಾಹೇಬ್ ಪಿ ಅವರಿಗೆ ಪ್ರಶಸ್ತಿ ಸಿಕ್ಕಿದೆ. </p>.<p>ಹಿರಿಯ ಪ್ರಾಥಮಿಕ ಶಾಲೆ: ಬಳ್ಳಾರಿಯ ಬೈಲೂರು ಶಾಲೆಯ ವಿ. ತ್ರಿವೇಣಿ, ಕುರುಗೋಡು ಶಾಲೆಯ ಗವಿಸಿದ್ದಪ್ಪ, ಸಂಡೂರಿನ ತುಂಬರಗುದ್ದಿಯ ಅರ್ಚನಾ, ಸಿರುಗುಪ್ಪದ ಅರಳಿಗನೂರು ಶಾಲೆಯ ಎರೆಪ್ಪಗೌಡ ಸಿ.ಡಿಗೆ ಪ್ರಶಸ್ತಿ ಲಭಿಸಿದೆ. </p>.<p>ಪ್ರೌಢಶಾಲಾ ವಿಭಾಗ: ಬಳ್ಳಾರಿಯ ಕೆ.ವೀರಾಪುರದ ಟಿ.ಜಿ ನಾಗರಾಜ, ಕುರುಗೋಡು ತಾಲೂಕಿನ ಇಂದಿರಾನಗರ ಶಾಲೆಯ ಶ್ರೀಲತಾ ಪಿ, ಸಂಡೂರಿನ ಎಪಿಎಂಸಿ ಶಾಲೆಯ ಬಾಷ ಮೆಹಬೂಬ, ಸಿರುಗುಪ್ಪದ ಕುರುವಳ್ಳಿ ಶಾಲೆಯ ಸಂತೋಷ ಅವರಿಗೆ ಪ್ರಶಸ್ತಿ ಸಿಕ್ಕಿದೆ. </p>.<p>ನಗರದ ವಾಲ್ಮೀಕಿ ಭವನದಲ್ಲಿ ಇಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಡಿಡಿಪಿಐ ಕಚೇರಿ ತಿಳಿಸಿದೆ. </p>.<p>ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ₹2 ಸಾವಿರ ನಗದು, ಪ್ರಮಾಣ ಪತ್ರ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ 3 ಸಾವಿರ ನಗದು ಮತ್ತು ಪ್ರಮಾಣ ಪತ್ರವನ್ನು ಪ್ರಶಸ್ತಿ ಜತೆಗೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: 2024–25ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಬುಧವಾರ ಬಿಡುಗಡೆ ಮಾಡಿದ್ದು, ಮೂರು ವಿಭಾಗಗಳಲ್ಲಿ 12 ಮಂದಿಗೆ ಪ್ರಶಸ್ತಿ ದೊರೆತಿದೆ. </p>.<p>ಕಿರಿಯ ಪ್ರಾಥಮಿಕ ಶಾಲೆ: ಬಳ್ಳಾರಿಯ ಬಾಲಯ್ಯ ಕ್ಯಾಂಪ್ ಶಾಲೆಯ ಮಹಾಂತೇಶ್ ಮೇಟಿ, ಕುರುಗೋಡಿನ ಕರಿಮಾರೆಮ್ಮ ಕಾಲೋನಿ ಶಾಲೆಯ ಹೊನ್ನೂರ್ ಬಿ, ಸಂಡೂರಿನ ಆಶ್ರಯ ಕಾಲೋನಿ ಸೋವೇನಹಳ್ಳಿ ಶಾಲೆಯ ಕುಮಾರಸ್ವಾಮಿ, ಸಿರುಗುಪ್ಪದ ದೇವಲಾಪುರ ಶಾಲೆಯ ಫಕ್ರುದ್ದೀನ್ ಸಾಹೇಬ್ ಪಿ ಅವರಿಗೆ ಪ್ರಶಸ್ತಿ ಸಿಕ್ಕಿದೆ. </p>.<p>ಹಿರಿಯ ಪ್ರಾಥಮಿಕ ಶಾಲೆ: ಬಳ್ಳಾರಿಯ ಬೈಲೂರು ಶಾಲೆಯ ವಿ. ತ್ರಿವೇಣಿ, ಕುರುಗೋಡು ಶಾಲೆಯ ಗವಿಸಿದ್ದಪ್ಪ, ಸಂಡೂರಿನ ತುಂಬರಗುದ್ದಿಯ ಅರ್ಚನಾ, ಸಿರುಗುಪ್ಪದ ಅರಳಿಗನೂರು ಶಾಲೆಯ ಎರೆಪ್ಪಗೌಡ ಸಿ.ಡಿಗೆ ಪ್ರಶಸ್ತಿ ಲಭಿಸಿದೆ. </p>.<p>ಪ್ರೌಢಶಾಲಾ ವಿಭಾಗ: ಬಳ್ಳಾರಿಯ ಕೆ.ವೀರಾಪುರದ ಟಿ.ಜಿ ನಾಗರಾಜ, ಕುರುಗೋಡು ತಾಲೂಕಿನ ಇಂದಿರಾನಗರ ಶಾಲೆಯ ಶ್ರೀಲತಾ ಪಿ, ಸಂಡೂರಿನ ಎಪಿಎಂಸಿ ಶಾಲೆಯ ಬಾಷ ಮೆಹಬೂಬ, ಸಿರುಗುಪ್ಪದ ಕುರುವಳ್ಳಿ ಶಾಲೆಯ ಸಂತೋಷ ಅವರಿಗೆ ಪ್ರಶಸ್ತಿ ಸಿಕ್ಕಿದೆ. </p>.<p>ನಗರದ ವಾಲ್ಮೀಕಿ ಭವನದಲ್ಲಿ ಇಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಡಿಡಿಪಿಐ ಕಚೇರಿ ತಿಳಿಸಿದೆ. </p>.<p>ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ₹2 ಸಾವಿರ ನಗದು, ಪ್ರಮಾಣ ಪತ್ರ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ 3 ಸಾವಿರ ನಗದು ಮತ್ತು ಪ್ರಮಾಣ ಪತ್ರವನ್ನು ಪ್ರಶಸ್ತಿ ಜತೆಗೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>