ಸಂದೀಪ್, ಸಂಗನಕಲ್ ಗ್ರಾಮದಲ್ಲಿ ‘ಬಳ್ಳಾರಿ ಒನ್’ ನಡೆಸುತ್ತಿದ್ದರು. ಅಪಘಾತದಲ್ಲಿ ಸಂದೀಪ್, ಅವರ ತಾಯಿ ಸುಜಾತಾ, ತಂದೆ ಕೊಟ್ರೇಶ್ ಮೃತಪಟ್ಟಿದ್ದಾರೆ. ಮಗ, ಸೊಸೆ, ಮೊಮ್ಮಗನನ್ನು ಕಳೆದುಕೊಂಡು ಕೊಟ್ರೇಶ್ ಅವರ ತಾಯಿ ರೋದಿಸುತ್ತಿದ್ದುದ್ದನ್ನು ಕಂಡು ಸುತ್ತಲಿದ್ದವರು ಕಣ್ಣಾಲಿಗಳು ತುಂಬಿದ್ದವು. ಅಜ್ಜಿ ತಮ್ಮ ಮಗ, ಮೊಮ್ಮಗನ ಒಡನಾಟ ನೆನದು ಬಿಕ್ಕಿಬಿಕ್ಕಿ ಅಳುತ್ತಿದ್ದರು.