<p>ಅರಸೀಕೆರೆ: ಹೋಬಳಿಯ ವ್ಯಾಪ್ತಿಯಲ್ಲಿ ಬಿಸಿಲ ಪ್ರಖರತೆ 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಬಿಸಿಲು ಲೆಕ್ಕಿಸದೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮಾಜಿ ಶಾಸಕ ಎಸ್.ವಿ ರಾಮಚಂದ್ರ ಹಾಗೂ ಎಚ್.ಪಿ ರಾಜೇಶ್ ಬಿರುಸಿನ ಪ್ರಚಾರ ನಡೆಸಿದರು.</p>.<p>ರಾಮನಗರ, ಫಣಿಯಪುರ, ಕುರೆ ಮಾಗನಹಳ್ಳಿ, ರಾಮಘಟ್ಟ ಚಟ್ನಿಹಳ್ಳಿ, ಅಣಜಿಗೆರೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಅಣಜಿಗೆರೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ತೊರೆದು 50ಕ್ಕೂ ಹೆಚ್ಚು ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡರು.</p>.<p>ಮಾಜಿ ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ‘ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಬರ ಪರಿಹಾರದ ಹಣ ರೈತರಿಗೆ ಅನುಕೂಲ ಆಗಲಿದೆ. ಏ.28 ರಂದು ದಾವಣಗೆರೆ ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದರು.</p>.<p>ಮಾಜಿ ಶಾಸಕ ಎಚ್.ಪಿ ರಾಜೇಶ್, ‘ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ವೇತನ, ದಿನ ನಿತ್ಯದ ಸಾಮಗ್ರಿ, ರೈತ ಬಳಕೆಯ ಟಿ.ಸಿ, ಮೋಟರ್ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಮಾಡಿದೆ ಎಂದು ಕಿಡಿ ಕಾರಿದರು.</p>.<p>ಪ್ರಪಂಚಕ್ಕೆ ಮಾದರಿ ರಾಷ್ಟ್ರ ನಿರ್ಮಾಣದ ಮೋದೀಜಿ ಕನಸಿಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಮತದಾನ ಮಾಡುವ ಮೂಲಕ ಸಾಕಾರಗೊಳಿಸಿಬೇಕು ಎಂದರು.</p>.<p>‘ಎಸ್.ವಿ ರಾಮಚಂದ್ರ ಹಾಗೂ ಎಚ್.ಪಿ ರಾಜೇಶ್ ಕ್ಷೇತ್ರದ ಜೋಡೆತ್ತುಗಳಾಗಿ ಸಂಘಟನೆಯಲ್ಲಿ ತೊಡಗಿದ್ದು, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಮಹತ್ವದ ಮತಗಳಿಕೆಗೆ ಸಹಕಾರಿ ಆಗಲಿದೆ’ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕಲ್ಲೇ ರುದ್ರೇಶ್ ಹೇಳಿದರು.</p>.<p>ಈ ಸಂದರ್ಭದಲ್ಲಿ ಜಿ.ಎಂ ಅನಿತ್ ಕುಮಾರ್, ಪಲ್ಲಗಟ್ಟಿ ಮಹೇಶ್, ಚಟ್ನಿಹಳ್ಳಿ ರಾಜಣ್ಣ, ಫಣಿಯಾಪುರ ಲಿಂಗರಾಜ, ಬಸವರಾಜ, ನಾಗನಗೌಡ, ವಿಜಯ್ ಕುಮಾರ್, ಕಲ್ಲಹಳ್ಳಿ ಸುರೇಶ, ಏಕಾಂತಪ್ಪ, ಕೆ.ಎನ್ ಪ್ರಕಾಶ್, ಹನುಮಂತನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅರಸೀಕೆರೆ: ಹೋಬಳಿಯ ವ್ಯಾಪ್ತಿಯಲ್ಲಿ ಬಿಸಿಲ ಪ್ರಖರತೆ 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಬಿಸಿಲು ಲೆಕ್ಕಿಸದೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮಾಜಿ ಶಾಸಕ ಎಸ್.ವಿ ರಾಮಚಂದ್ರ ಹಾಗೂ ಎಚ್.ಪಿ ರಾಜೇಶ್ ಬಿರುಸಿನ ಪ್ರಚಾರ ನಡೆಸಿದರು.</p>.<p>ರಾಮನಗರ, ಫಣಿಯಪುರ, ಕುರೆ ಮಾಗನಹಳ್ಳಿ, ರಾಮಘಟ್ಟ ಚಟ್ನಿಹಳ್ಳಿ, ಅಣಜಿಗೆರೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಅಣಜಿಗೆರೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ತೊರೆದು 50ಕ್ಕೂ ಹೆಚ್ಚು ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡರು.</p>.<p>ಮಾಜಿ ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ‘ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಬರ ಪರಿಹಾರದ ಹಣ ರೈತರಿಗೆ ಅನುಕೂಲ ಆಗಲಿದೆ. ಏ.28 ರಂದು ದಾವಣಗೆರೆ ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದರು.</p>.<p>ಮಾಜಿ ಶಾಸಕ ಎಚ್.ಪಿ ರಾಜೇಶ್, ‘ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ವೇತನ, ದಿನ ನಿತ್ಯದ ಸಾಮಗ್ರಿ, ರೈತ ಬಳಕೆಯ ಟಿ.ಸಿ, ಮೋಟರ್ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಮಾಡಿದೆ ಎಂದು ಕಿಡಿ ಕಾರಿದರು.</p>.<p>ಪ್ರಪಂಚಕ್ಕೆ ಮಾದರಿ ರಾಷ್ಟ್ರ ನಿರ್ಮಾಣದ ಮೋದೀಜಿ ಕನಸಿಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಮತದಾನ ಮಾಡುವ ಮೂಲಕ ಸಾಕಾರಗೊಳಿಸಿಬೇಕು ಎಂದರು.</p>.<p>‘ಎಸ್.ವಿ ರಾಮಚಂದ್ರ ಹಾಗೂ ಎಚ್.ಪಿ ರಾಜೇಶ್ ಕ್ಷೇತ್ರದ ಜೋಡೆತ್ತುಗಳಾಗಿ ಸಂಘಟನೆಯಲ್ಲಿ ತೊಡಗಿದ್ದು, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಮಹತ್ವದ ಮತಗಳಿಕೆಗೆ ಸಹಕಾರಿ ಆಗಲಿದೆ’ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕಲ್ಲೇ ರುದ್ರೇಶ್ ಹೇಳಿದರು.</p>.<p>ಈ ಸಂದರ್ಭದಲ್ಲಿ ಜಿ.ಎಂ ಅನಿತ್ ಕುಮಾರ್, ಪಲ್ಲಗಟ್ಟಿ ಮಹೇಶ್, ಚಟ್ನಿಹಳ್ಳಿ ರಾಜಣ್ಣ, ಫಣಿಯಾಪುರ ಲಿಂಗರಾಜ, ಬಸವರಾಜ, ನಾಗನಗೌಡ, ವಿಜಯ್ ಕುಮಾರ್, ಕಲ್ಲಹಳ್ಳಿ ಸುರೇಶ, ಏಕಾಂತಪ್ಪ, ಕೆ.ಎನ್ ಪ್ರಕಾಶ್, ಹನುಮಂತನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>