ಲೇಖಕರಾದ ವೆಂಕಟಯ್ಯ ಅಪ್ಪಗೆರೆ, ಗಂಗಾಧರ ಪತ್ತಾರ ಸೇರಿದಂತೆ ಹದಿನಾರು ಪ್ರಬುದ್ಧರ ಕಂಠದಾನ, ವಿ.ಟಿ.ಕಾಳೆ, ರಘುನಾಥ್ ಹವಾಲ್ದಾರರ ಅಂದದ ರೇಖಾಚಿತ್ರಗಳು, ಅವನ್ನು ಪಾರದರ್ಶಕ ವರ್ಣರಂಜಿತ ತೊಗಲುಗೊಂಬೆಗಳಾಗಿ ರೂಪಿಸಿದ ಬೆಳಗಲ್ಲು ಮಲ್ಲಿಕಾರ್ಜುನ, ಮಾರುತಿ, ಸುದರ್ಶನ ಅವರೊಂದಿಗೆ ಕೆ.ಎಂ.ಶಶಿಧರ್, ರವಿ ಹಡಗಲಿಯವರ ಜೊತೆ ಆಲಾಪಿಸುವುದರೊಂದಿಗೆ ಸಂಗೀತ ಸಂಯೋಜಿಸಿದ ಬೆಳಗಲ್ಲು ಪ್ರಕಾಶ ಪ್ರದರ್ಶನಕ್ಕೆ ಮೆರುಗು ತಂದರು. ಇಡೀ ರೂಪಕವನ್ನು ನಿರ್ದೇಶಿಸಿದವರು ಬೆಳಗಲ್ಲು ವೀರಣ್ಣನವರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.