ಸ್ವಾತಂತ್ರ್ಯ ದೊರೆತು ಏಳು ದಶಕಗಳಾದರೂ ಕೆಳಜಾತಿಯಲ್ಲಿರುವ ತಳವರ್ಗದವರು ಇದುವರೆಗೆ ಮುಖ್ಯವಾಹಿನಿಗೆ ಬಂದಿಲ್ಲ. ಒಳಮೀಸಲಾತಿ ಜಾರಿಗೆ ತಂದರೆ ಮಾತ್ರ ಮೇಲೆ ಬರಲು ಸಾಧ್ಯವಾಗಬಹುದು. ವಾಸ್ತವದಲ್ಲಿ ಮಾದಿಗ ಸಮುದಾಯದವರು ಪಡೆಯಬೇಕಾದ ಮೀಸಲಾತಿಯ ಪ್ರಯೋಜನವನ್ನು ಲಮಾಣಿ, ಭೋವಿ, ಕೊರಚ, ಕೊರಮ ಉಪಜಾತಿಗಳವರು ಪಡೆದುಕೊಳ್ಳುತ್ತಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ, ಈ ಉಪಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕು. ಆಗ ಅಸ್ಪೃಶ್ಯ ಜಾತಿಗಳವರಿಗೆ ನ್ಯಾಯ ಸಿಗುತ್ತದೆ ಎಂದು ಪ್ರತಿಪಾದಿಸಿದರು.