<p><strong>ಸಂಡೂರು</strong>: ತಾಲ್ಲೂಕಿನ ಬಂಡ್ರಿ, ಮೆಟ್ರಿಕಿ ಗ್ರಾಮಗಳಲ್ಲಿನ ಖನಿಜ ಸಂಯುಕ್ತ ತನಿಖಾ ಠಾಣೆಗಳು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸದೆ ವ್ಯರ್ಥವಾಗಿವೆ.</p>.<p>ಅದಿರು ಅಕ್ರಮ ಸಾಗಾಣಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ತಾಲ್ಲೂಕಿನ ರಾಜಾಪುರ, ಬನ್ನಿಹಟ್ಟಿ, ಮೆಟ್ರಿಕಿ, ಬಂಡ್ರಿ ಗ್ರಾಮಗಳ ವ್ಯಾಪ್ತಿಯಲ್ಲಿ ಸುಪ್ರೀಂ ಕೋರ್ಟ್ನ 2013ರ ಆದೇಶದ ಪ್ರಕಾರ ಒಟ್ಟು ನಾಲ್ಕು ಸ್ಥಳಗಳಲ್ಲಿ ಠಾಣೆಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ತೆರೆಯಲಾಗಿದೆ.</p>.<p>ಅದಿರು ಅಕ್ರಮ ಸಾಗಾಣೆ ತಡೆಯಲು ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ ಪರಿಣಾಮ ಅದಿರು ಸಾಗಾಣಿಕೆ ಮಾರ್ಗದಲ್ಲಿ ಖನಿಜ ಸಂಯುಕ್ತ ತನಿಖಾ ಠಾಣೆಗಳನ್ನು ಆರಂಭಿಸಲು ಸುಪ್ರೀಂ ಕೋರ್ಟ್ ಸೂಚಿಸಿತ್ತು.</p>.<p>ಸದ್ಯ ಬಂಡ್ರಿ, ರಾಜಾಪುರ ಗ್ರಾಮಗಳ ವ್ಯಾಪ್ತಿಯಲ್ಲಿನ ತನಿಖಾ ಠಾಣೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದ ಎರಡು ಠಾಣೆಗಳು ಕಾರ್ಯಭಾರವಿಲ್ಲದೆ ಹಲವಾರು ವರ್ಷಗಳಿಂದ ಸ್ಥಗಿತಗೊಂಡಿವೆ.</p>.<p>ಬಂಡ್ರಿ ಗ್ರಾಮದ ಬಳಿಯ ಖನಿಜ ಠಾಣೆಗೆ ಬೀಗ ಜಡಿಯಲಾಗಿದ್ದು, ಮೆಟ್ರಿಕಿ ಗ್ರಾಮದ ಆಂಧ್ರ ಗಡಿಲ್ಲಿನ ಖನಿಜ ತನಿಖಾ ಠಾಣೆಯ ಆವರಣದಲ್ಲಿ ತೂಕ ಮಾಪನ ಯಂತ್ರದ ಕಾಮಗಾರಿಯು ಅರ್ಧಕ್ಕೆ ನಿಂತಿದೆ. </p>.<p>ಎರಡು ಗ್ರಾಮಗಳಲ್ಲಿನ ಸಂಯುಕ್ತ ಖನಿಜ ತನಿಖಾ ಠಾಣೆಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ವಹಣೆಯ ಕೊರತೆಯಿಂದ ನಿರುಪಯುಕ್ತವಾಗಿದ್ದರಿಂದ ಈ ಠಾಣೆಗಳ ವ್ಯಾಪ್ತಿಯಲ್ಲಿ ಜಲ್ಲಿಕಲ್ಲು, ಎಂ ಸ್ಯಾಂಡ್, ಮರಳು ಗಣಿಗಾರಿಕೆಯು ಅಕ್ರಮವಾಗಿ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ.</p>.<p>ತನಿಖಾ ಠಾಣೆಗಳ ಕಾರ್ಯಾಚರಣೆ ಸ್ಥಗಿತಗೊಂಡಿರುವುದರಿಂದ ಕ್ವಾರಿ ಮಾಲೀಕರು ಒಂದೇ ಪರ್ಮಿಟ್ನಲ್ಲಿ ನಿರಂತರವಾಗಿ ಅಕ್ರಮ ಸಾಗಾಣಿಕೆ ಮಾಡಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. </p>.<p>ಅಕ್ರಮ ಸಾಗಾಣಿಕೆಯ ಮೇಲೆ ಕಣ್ಗಾವಲು ಇರಿಸಲು ರಾಜ್ಯ ಸರ್ಕಾರವು ಈ ಕೂಡಲೇ ಖನಿಜ ತನಿಖಾ ಠಾಣೆಗಳಿಗೆ ನೂತನ ಕಟ್ಟಡ, ತೂಕದ ಮಾಪನ ಯಂತ್ರಗಳ ಅಳವಡಿಕೆ, ಅಗತ್ಯ ಸಿಬ್ಬಂದಿ ಸೇರಿದಂತೆ ಇತರೆ ಮೂಲ ಸೌಲಭ್ಯ ಕಲ್ಪಿಸಿ, ಶೀಘ್ರದಲ್ಲೇ ಆರಂಭಿಸಬೇಕು ಎಂಬುದು ಜನರು ಒತ್ತಾಯ.</p>.<p>ಸ್ಥಗಿತಗೊಂಡ ಸಂಯುಕ್ತ ಖನಿಜ ತನಿಖಾ ಠಾಣೆಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮೂಲ ಸೌಲಭ್ಯಗಳನ್ನು ಕಲ್ಪಿಸಿ ಶೀಘ್ರವಾಗಿ ಪುನರ್ ಆರಂಭಿಸಬೇಕು</p><p>–ಶ್ರೀಶೈಲ ಆಲ್ದಳ್ಳಿ ಜನ ಸಂಗ್ರಾಮ ಪರಿಷತ್ ಮುಖಂಡ</p>.<p>ಸ್ಥಗಿತಗೊಂಡ ಎರಡು ಖನಿಜ ತನಿಖಾ ಠಾಣೆಗಳ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಠಾಣೆಗಳನ್ನು ಆರಂಭಿಸಲು ಸೂಕ್ತ ಕ್ರಮ ವಹಿಸಲಾಗುವುದು</p><p>–ದ್ವಿತೀಯಾ ಇ.ಸಿ. ಗಣಿ ಇಲಾಖೆ ಉಪ ನಿರ್ದೇಶಕಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಡೂರು</strong>: ತಾಲ್ಲೂಕಿನ ಬಂಡ್ರಿ, ಮೆಟ್ರಿಕಿ ಗ್ರಾಮಗಳಲ್ಲಿನ ಖನಿಜ ಸಂಯುಕ್ತ ತನಿಖಾ ಠಾಣೆಗಳು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸದೆ ವ್ಯರ್ಥವಾಗಿವೆ.</p>.<p>ಅದಿರು ಅಕ್ರಮ ಸಾಗಾಣಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ತಾಲ್ಲೂಕಿನ ರಾಜಾಪುರ, ಬನ್ನಿಹಟ್ಟಿ, ಮೆಟ್ರಿಕಿ, ಬಂಡ್ರಿ ಗ್ರಾಮಗಳ ವ್ಯಾಪ್ತಿಯಲ್ಲಿ ಸುಪ್ರೀಂ ಕೋರ್ಟ್ನ 2013ರ ಆದೇಶದ ಪ್ರಕಾರ ಒಟ್ಟು ನಾಲ್ಕು ಸ್ಥಳಗಳಲ್ಲಿ ಠಾಣೆಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ತೆರೆಯಲಾಗಿದೆ.</p>.<p>ಅದಿರು ಅಕ್ರಮ ಸಾಗಾಣೆ ತಡೆಯಲು ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ ಪರಿಣಾಮ ಅದಿರು ಸಾಗಾಣಿಕೆ ಮಾರ್ಗದಲ್ಲಿ ಖನಿಜ ಸಂಯುಕ್ತ ತನಿಖಾ ಠಾಣೆಗಳನ್ನು ಆರಂಭಿಸಲು ಸುಪ್ರೀಂ ಕೋರ್ಟ್ ಸೂಚಿಸಿತ್ತು.</p>.<p>ಸದ್ಯ ಬಂಡ್ರಿ, ರಾಜಾಪುರ ಗ್ರಾಮಗಳ ವ್ಯಾಪ್ತಿಯಲ್ಲಿನ ತನಿಖಾ ಠಾಣೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದ ಎರಡು ಠಾಣೆಗಳು ಕಾರ್ಯಭಾರವಿಲ್ಲದೆ ಹಲವಾರು ವರ್ಷಗಳಿಂದ ಸ್ಥಗಿತಗೊಂಡಿವೆ.</p>.<p>ಬಂಡ್ರಿ ಗ್ರಾಮದ ಬಳಿಯ ಖನಿಜ ಠಾಣೆಗೆ ಬೀಗ ಜಡಿಯಲಾಗಿದ್ದು, ಮೆಟ್ರಿಕಿ ಗ್ರಾಮದ ಆಂಧ್ರ ಗಡಿಲ್ಲಿನ ಖನಿಜ ತನಿಖಾ ಠಾಣೆಯ ಆವರಣದಲ್ಲಿ ತೂಕ ಮಾಪನ ಯಂತ್ರದ ಕಾಮಗಾರಿಯು ಅರ್ಧಕ್ಕೆ ನಿಂತಿದೆ. </p>.<p>ಎರಡು ಗ್ರಾಮಗಳಲ್ಲಿನ ಸಂಯುಕ್ತ ಖನಿಜ ತನಿಖಾ ಠಾಣೆಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ವಹಣೆಯ ಕೊರತೆಯಿಂದ ನಿರುಪಯುಕ್ತವಾಗಿದ್ದರಿಂದ ಈ ಠಾಣೆಗಳ ವ್ಯಾಪ್ತಿಯಲ್ಲಿ ಜಲ್ಲಿಕಲ್ಲು, ಎಂ ಸ್ಯಾಂಡ್, ಮರಳು ಗಣಿಗಾರಿಕೆಯು ಅಕ್ರಮವಾಗಿ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ.</p>.<p>ತನಿಖಾ ಠಾಣೆಗಳ ಕಾರ್ಯಾಚರಣೆ ಸ್ಥಗಿತಗೊಂಡಿರುವುದರಿಂದ ಕ್ವಾರಿ ಮಾಲೀಕರು ಒಂದೇ ಪರ್ಮಿಟ್ನಲ್ಲಿ ನಿರಂತರವಾಗಿ ಅಕ್ರಮ ಸಾಗಾಣಿಕೆ ಮಾಡಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. </p>.<p>ಅಕ್ರಮ ಸಾಗಾಣಿಕೆಯ ಮೇಲೆ ಕಣ್ಗಾವಲು ಇರಿಸಲು ರಾಜ್ಯ ಸರ್ಕಾರವು ಈ ಕೂಡಲೇ ಖನಿಜ ತನಿಖಾ ಠಾಣೆಗಳಿಗೆ ನೂತನ ಕಟ್ಟಡ, ತೂಕದ ಮಾಪನ ಯಂತ್ರಗಳ ಅಳವಡಿಕೆ, ಅಗತ್ಯ ಸಿಬ್ಬಂದಿ ಸೇರಿದಂತೆ ಇತರೆ ಮೂಲ ಸೌಲಭ್ಯ ಕಲ್ಪಿಸಿ, ಶೀಘ್ರದಲ್ಲೇ ಆರಂಭಿಸಬೇಕು ಎಂಬುದು ಜನರು ಒತ್ತಾಯ.</p>.<p>ಸ್ಥಗಿತಗೊಂಡ ಸಂಯುಕ್ತ ಖನಿಜ ತನಿಖಾ ಠಾಣೆಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮೂಲ ಸೌಲಭ್ಯಗಳನ್ನು ಕಲ್ಪಿಸಿ ಶೀಘ್ರವಾಗಿ ಪುನರ್ ಆರಂಭಿಸಬೇಕು</p><p>–ಶ್ರೀಶೈಲ ಆಲ್ದಳ್ಳಿ ಜನ ಸಂಗ್ರಾಮ ಪರಿಷತ್ ಮುಖಂಡ</p>.<p>ಸ್ಥಗಿತಗೊಂಡ ಎರಡು ಖನಿಜ ತನಿಖಾ ಠಾಣೆಗಳ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಠಾಣೆಗಳನ್ನು ಆರಂಭಿಸಲು ಸೂಕ್ತ ಕ್ರಮ ವಹಿಸಲಾಗುವುದು</p><p>–ದ್ವಿತೀಯಾ ಇ.ಸಿ. ಗಣಿ ಇಲಾಖೆ ಉಪ ನಿರ್ದೇಶಕಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>