ಡಿ.21, 28ರಂದು ಸೋಮಲಾಪುರದ ಎರದಮಟ್ಟಿಯಲ್ಲಿ ತಲಾ ಒಂದು, ಡಿ. 30ರಂದು ದೇವಲಾಪುರದ ಕರಿಮಟ್ಟಿಯಲ್ಲಿ ಚಿರತೆ ಬೋನಿಗೆ ಬಿದ್ದಿತ್ತು. ಡಿ. 11ರಂದು ಸೋಮಲಾಪುರದ ಮೂರು ವರ್ಷದ ಬಾಲಕ ವೆಂಕಟಸ್ವಾಮಿ, ಡಿ. 25ರಂದು ದೇವಲಾಪುರದ ಒಂಬತ್ತು ವರ್ಷದ ಜಯಸುಧಾ ಚಿರತೆಗೆ ಬಲಿಯಾಗಿದ್ದಳು. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದರಿಂದ ಎಚ್ಚೆತ್ತ ಇಲಾಖೆಯು ಚಿರತೆ ಚಲನವಲನ ಹೆಚ್ಚಾಗಿರುವ ಪ್ರದೇಶಗಳಲ್ಲಿ ಬೋನು ಇರಿಸಿತ್ತು.