<p><strong>ಕುಡತಿನಿ (ಸಂಡೂರು):</strong> ಪಟ್ಟಣದ ಗ್ರಂಥಾಲಯದ ಆವರಣದಲ್ಲಿರುವ ಮಹಾತ್ಮ ಗಾಂಧಿಯ ನೂತನ ಸ್ಮಾರಕದ ಕಟ್ಟಡ ಕಾಮಗಾರಿಯು ಅಧಿಕಾರಿ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಳಪೆಯಾಗಿದೆ ಎಂದು ಆರೋಪಿಸಿ ಪಟ್ಟಣ ಪಂಚಾಯಿತಿಯ ಸದಸ್ಯರು, ಮುಖಂಡರು ಕಾಮಗಾರಿಯ ಸ್ಥಳದಲ್ಲಿ ಗುರುವಾರ ಕೆಲಕಾಲ ಪ್ರತಿಭಟನೆ ನಡೆಸಿದರು.</p>.<p>ಪಟ್ಟಣ ಪಂಚಾಯಿತಿ 5ನೇ ವಾರ್ಡ್ನ ಸದಸ್ಯ ಕೆ.ಎಂ. ಹಾಲಪ್ಪ ಮಾತನಾಡಿ, ‘ಕಟ್ಟಡಕ್ಕೆ ಸಕಾಲಕ್ಕೆ ಕ್ಯೂರಿಂಗ್ ಮಾಡಿಲ್ಲ. ಈ ವಿಚಾರವಾಗಿ ಪಂಚಾಯಿತಿಯ ಮುಖ್ಯಾಧಿಕಾರಿ ಬಳಿ ಚರ್ಚಿಸಿದರೆ ಉಡಾಫೆಯಾಗಿ ಉತ್ತರ ನೀಡುತ್ತಿದ್ದಾರೆ. ಸ್ಮಾರಕದ ಸುತ್ತಲೂ ದನ ಕರುಗಳು ಬರದಂತೆ ಕಬ್ಬಿಣದ ಗ್ರಿಲ್ ಅಳವಡಿಸಬೇಕು’ ಎಂದರು.</p>.<p>‘ಗಾಂಧೀಜಿ ನೂತನ ಸ್ಮಾರಕದ ಕಟ್ಟಡ ಕಾಮಗಾರಿಯನ್ನು ಖಾಸಗಿ ಕಂಪನಿಯ ₹10ಲಕ್ಷ ವೆಚ್ಚದ ಅನುದಾನದಲ್ಲಿ ನಿರ್ಮಿಸುತ್ತಿದೆ. ಕಾಮಗಾರಿ ಕಳಪೆಯಾಗದಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ತಿಳಿಸಿದರು.</p>.<p>ಪಂಚಾಯಿತಿಯ ಸದಸ್ಯರಾದ ಸಿ.ಡಿ.ದುಗ್ಗೆಪ್ಪ, ಬಿ.ಕೆ.ಲೆನಿನ್, ಮುಖಂಡರಾದ ರಾಮಚಂದ್ರಪ್ಪ, ರಾಮಕೃಷ್ಣ, ಸಾಯಿಬಣ್ಣ, ಎರ್ರಿಸ್ವಾಮಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಡತಿನಿ (ಸಂಡೂರು):</strong> ಪಟ್ಟಣದ ಗ್ರಂಥಾಲಯದ ಆವರಣದಲ್ಲಿರುವ ಮಹಾತ್ಮ ಗಾಂಧಿಯ ನೂತನ ಸ್ಮಾರಕದ ಕಟ್ಟಡ ಕಾಮಗಾರಿಯು ಅಧಿಕಾರಿ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಳಪೆಯಾಗಿದೆ ಎಂದು ಆರೋಪಿಸಿ ಪಟ್ಟಣ ಪಂಚಾಯಿತಿಯ ಸದಸ್ಯರು, ಮುಖಂಡರು ಕಾಮಗಾರಿಯ ಸ್ಥಳದಲ್ಲಿ ಗುರುವಾರ ಕೆಲಕಾಲ ಪ್ರತಿಭಟನೆ ನಡೆಸಿದರು.</p>.<p>ಪಟ್ಟಣ ಪಂಚಾಯಿತಿ 5ನೇ ವಾರ್ಡ್ನ ಸದಸ್ಯ ಕೆ.ಎಂ. ಹಾಲಪ್ಪ ಮಾತನಾಡಿ, ‘ಕಟ್ಟಡಕ್ಕೆ ಸಕಾಲಕ್ಕೆ ಕ್ಯೂರಿಂಗ್ ಮಾಡಿಲ್ಲ. ಈ ವಿಚಾರವಾಗಿ ಪಂಚಾಯಿತಿಯ ಮುಖ್ಯಾಧಿಕಾರಿ ಬಳಿ ಚರ್ಚಿಸಿದರೆ ಉಡಾಫೆಯಾಗಿ ಉತ್ತರ ನೀಡುತ್ತಿದ್ದಾರೆ. ಸ್ಮಾರಕದ ಸುತ್ತಲೂ ದನ ಕರುಗಳು ಬರದಂತೆ ಕಬ್ಬಿಣದ ಗ್ರಿಲ್ ಅಳವಡಿಸಬೇಕು’ ಎಂದರು.</p>.<p>‘ಗಾಂಧೀಜಿ ನೂತನ ಸ್ಮಾರಕದ ಕಟ್ಟಡ ಕಾಮಗಾರಿಯನ್ನು ಖಾಸಗಿ ಕಂಪನಿಯ ₹10ಲಕ್ಷ ವೆಚ್ಚದ ಅನುದಾನದಲ್ಲಿ ನಿರ್ಮಿಸುತ್ತಿದೆ. ಕಾಮಗಾರಿ ಕಳಪೆಯಾಗದಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ತಿಳಿಸಿದರು.</p>.<p>ಪಂಚಾಯಿತಿಯ ಸದಸ್ಯರಾದ ಸಿ.ಡಿ.ದುಗ್ಗೆಪ್ಪ, ಬಿ.ಕೆ.ಲೆನಿನ್, ಮುಖಂಡರಾದ ರಾಮಚಂದ್ರಪ್ಪ, ರಾಮಕೃಷ್ಣ, ಸಾಯಿಬಣ್ಣ, ಎರ್ರಿಸ್ವಾಮಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>