ಕೂಡ್ಲಿಗಿ: ಹನುಮ ಜಯಂತಿ ಅಂಗವಾಗಿ ಹನುಮ ಮಾಲಾಧಾರಿಗಳು ಪಟ್ಟಣದಲ್ಲಿ ಭಾನುವಾರ ಶೋಭಾಯಾತ್ರೆ ನಡೆಸಿದರು.
ಹನುಮ ಧ್ವಜ ಹಾಗೂ ಕೇಸರಿ ಧ್ವಜಗಳೊಂದಿಗೆ ಪಟ್ಟಣದ ಹೊರ ವಲಯದ ವಜ್ರ ಮುಷ್ಠಿ ಆಂಜನೇಯ ದೇವಸ್ಥಾನದಿಂದ ಶೋಭಾ ಯಾತ್ರೆ ಹೊರಟ ನೂರಾರು ಮಾಲಾಧಾರಿಗಳು ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಪಾದಗಟ್ಟೆ, ಮದಕರಿ ವೃತ್ತದ ಮೂಲಕ ಕೊತ್ತಲಾಂಜನೇಯ ದೇವಸ್ಥಾನ ತಲುಪಿದರು.