ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಂಡಲ ಅಧ್ಯಕ್ಷ ಎಸ್.ಸಂಜೀವರೆಡ್ಡಿ, ಎಂ.ಬಿ.ಬಸವರಾಜ, ಈಟಿ ಲಿಂಗರಾಜ, ಕರೆಂಗಿ ಸುಭಾಶ್ಚಂದ್ರ ಸಮ್ಮುಖದಲ್ಲಿ, ವಿಜಯಕುಮಾರ್ ಹಿರೇಮಠ, ಸಾತ್ವಿಕ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷರಾದ ಕೋಡಿಹಳ್ಳಿ ಕೊಟ್ರೇಶ, ಹಣ್ಣಿ ವೀರಮ್ಮ, ಆರ್.ಪವಿತ್ರ, ಯಮುನಪ್ಪ, ಮಾಜಿ ಸದಸ್ಯ ಆರ್.ಚೈತನ್ಯ, ಮುಖಂಡರಾದ ಸುದರ್ಶನ ಶಿಲ್ಪಿ, ಹನುಮಂತು, ಬಿ.ಎಂ.ಅಭಿಷೇಕ, ಸುರೇಶ ಕಾಯಣ್ಣನವರ, ಕಿರಣಕುಮಾರ್ ಲಿಂಗದಹಳ್ಳಿ, ಎಂ.ಪಿ.ಅರುಣ, ಗೀತಾ ದೇಸಾಯಿ ಅವರು ಬಿಜೆಪಿ ಸೇರ್ಪಡೆಯಾದರು.