‘ನರೇಂದ್ರ ಮೋದಿ ಕಾಮಧೇನು; ಹತ್ತು– ಹಲವು ಕೊಡುಗೆ ಕೊಟ್ಟಿದ್ದಾರೆ. ನಾನು ದೊಡ್ಡ ಪಟ್ಟಿಯನ್ನೇ ಕೊಡಬಹುದು. ಒಂದು ರಾಜ್ಯಕ್ಕೆ 6,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕೊಟ್ಟಿರುವುದು ಸ್ವಾತಂತ್ರ್ಯ ಭಾರತದಲ್ಲಿ ದಾಖಲೆ. ಬೆಂಗಳೂರು– ಮೈಸೂರು ಹೆದ್ದಾರಿ; ಮಂಗಳೂರು, ಕಾರವಾರ ಬಂದರು ಅಭಿವೃದ್ಧಿ, ಕಳಸಾ–ಬಂಡೂರಿಗೆ ಅನುಮೋದನೆ, ಇದರ ಅರಿವಿಲ್ಲದೆ, ರಾಜಕೀಯ ಪ್ರೇರಿತ ಹೇಳಿಕೆಯನ್ನು ಸಿದ್ದರಾಮಯ್ಯ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.