ನಗರಸಭೆ ಚುನಾವಣೆ ಸಂಬಂಧ ಡಿ. 11ರಂದು ನಗರದಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಸಭೆ ಏರ್ಪಡಿಸಲಾಗಿತ್ತು. ನಗರಸಭೆ 16ನೇ ವಾರ್ಡ್ಗೆ ಸೋಮಶೇಖರ್ ಬಣ್ಣದಮನೆ ಅವರ ಪತ್ನಿಗೆ ಪಕ್ಷದ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ, ಸಿರಾಜ್ ಶೇಖ್ ಅವರು ಬಿಜೆಪಿ ಕಾರ್ಯಕರ್ತ ಕಲಂದರ ಅವರ ಪತ್ನಿ ಮುಮ್ತಾಜ್ ಅವರಿಗೆ ಕಾಂಗ್ರೆಸ್ ‘ಬಿ’ ಫಾರಂ ಕೊಡಿಸಿದ್ದಾರೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಶಿವಯೋಗಿ ಆರೋಪಿಸಿದ್ದಾರೆ. ಅದರಿಂದ ಸಿಟ್ಟಿಗೆದ್ದ ಸಿರಾಜ್ ಶೇಕ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಪಕ್ಷದ ಮುಖಂಡರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು ಎಂದು ಗೊತ್ತಾಗಿದೆ.