<p><strong>ಬಳ್ಳಾರಿ: </strong>ನಗರದ ತಿಲಕ್ನಗರದಲ್ಲಿರುವ ಭವಾನಿ ಕಲಾಮಂದಿರದ ರಜತಮಹೋತ್ಸವದ ಅಂಗವಾಗಿ ಅಲ್ಲಿ ಬುಧವಾರದಿಂದ ಕಿನ್ನಾಲ ಕಲೆ ತರಬೇತಿ ಶಿಬಿರಕ್ಕೆ ಕಲಾವಿದ ಹೇಮಣ್ಣ ಚಿತ್ರಗಾರ ಚಾಲನೆ ನೀಡಿದರು.</p>.<p>‘ಚಿತ್ರ ಮತ್ತು ಶಿಲ್ಪದ ಸಂಗಮವಾದ ಈ ಕಲೆ ವಿಜಯನಗರ ಅರಸರ ಕಾಲದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಚಿತ್ರಕಲಾ ವಿದ್ಯಾರ್ಥಿಗಳು ಈ ಶೈಲಿಯನ್ನು ಕಲಿತು, ಬಳಸಬೇಕು’ ಎಂದು ಅವರು ಹೇಳಿದರು.</p>.<p>‘ಅರಸರ ಕಾಲದಲ್ಲಿ ಪ್ರಾಮುಖ್ಯತೆ ಪಡೆದಿದ್ದ ಈ ಚಿತ್ರಗಾರ ಕುಟುಂಬಗಳು ನಂತರ ಆಂಧ್ರ ಮತ್ತು ಕರ್ನಾಟಕದ ನಾನಾ ಪ್ರದೇಶಗಳಿಗೆ ವಲಸೆ ಹೋದರು. ಬಹುತೇಕರು ಕಸುಬನ್ನು ಮುಂದುವರಿಸಲಿಲ್ಲ. ಆದರೆ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮಕ್ಕೆ ಹೋದವರು ಕಸುಬನ್ನು ಮುಂದುವರಿಸಿದರು’ ಎಂದು ಸ್ಮರಿಸಿದರು.</p>.<p>‘ನಾಲ್ಕು ದಿನದ ಶಿಬಿರದಲ್ಲಿ ಕಿನ್ನಾಳ ಶಿಲ್ಪ ರಚಿಸುವ ಕಲೆಯನ್ನು ಹೇಳಿಕೊಡಲಾಗುವುದು. ಸಂಪ್ರದಾಯಬದ್ಧ ಶೈಲಿಯನ್ನು ಹೊಸ ತಲೆಮಾರು ಆಸಕ್ತಿಯಿಂದ ಕಲಿಯಬೇಕು’ ಎಂದರು.</p>.<p>ಕಲಾಮಂದಿರದ ವ್ಯವಸ್ಥಾಪಕ ಆರ್.ಎಲ್.ಜಾಧವ್, ಆರ್ಯ ಈಡಿಗ ವಿದ್ಯಾರ್ಥಿ ವಸತಿ ನಿಲಯದ ಅಧ್ಯಕ್ಷ ಶ್ರೀನಾಥ, ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಯು.ರಮೇಶ್ ಮತ್ತು ಚಿತ್ರಕಲಾ ಶಿಕ್ಷಕ ಕೆ.ಬಿ.ಸಿದ್ದಲಿಂಗಪ್ಪ ಇದ್ದರು. ಮಂದಿರದ 22 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ನಗರದ ತಿಲಕ್ನಗರದಲ್ಲಿರುವ ಭವಾನಿ ಕಲಾಮಂದಿರದ ರಜತಮಹೋತ್ಸವದ ಅಂಗವಾಗಿ ಅಲ್ಲಿ ಬುಧವಾರದಿಂದ ಕಿನ್ನಾಲ ಕಲೆ ತರಬೇತಿ ಶಿಬಿರಕ್ಕೆ ಕಲಾವಿದ ಹೇಮಣ್ಣ ಚಿತ್ರಗಾರ ಚಾಲನೆ ನೀಡಿದರು.</p>.<p>‘ಚಿತ್ರ ಮತ್ತು ಶಿಲ್ಪದ ಸಂಗಮವಾದ ಈ ಕಲೆ ವಿಜಯನಗರ ಅರಸರ ಕಾಲದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಚಿತ್ರಕಲಾ ವಿದ್ಯಾರ್ಥಿಗಳು ಈ ಶೈಲಿಯನ್ನು ಕಲಿತು, ಬಳಸಬೇಕು’ ಎಂದು ಅವರು ಹೇಳಿದರು.</p>.<p>‘ಅರಸರ ಕಾಲದಲ್ಲಿ ಪ್ರಾಮುಖ್ಯತೆ ಪಡೆದಿದ್ದ ಈ ಚಿತ್ರಗಾರ ಕುಟುಂಬಗಳು ನಂತರ ಆಂಧ್ರ ಮತ್ತು ಕರ್ನಾಟಕದ ನಾನಾ ಪ್ರದೇಶಗಳಿಗೆ ವಲಸೆ ಹೋದರು. ಬಹುತೇಕರು ಕಸುಬನ್ನು ಮುಂದುವರಿಸಲಿಲ್ಲ. ಆದರೆ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮಕ್ಕೆ ಹೋದವರು ಕಸುಬನ್ನು ಮುಂದುವರಿಸಿದರು’ ಎಂದು ಸ್ಮರಿಸಿದರು.</p>.<p>‘ನಾಲ್ಕು ದಿನದ ಶಿಬಿರದಲ್ಲಿ ಕಿನ್ನಾಳ ಶಿಲ್ಪ ರಚಿಸುವ ಕಲೆಯನ್ನು ಹೇಳಿಕೊಡಲಾಗುವುದು. ಸಂಪ್ರದಾಯಬದ್ಧ ಶೈಲಿಯನ್ನು ಹೊಸ ತಲೆಮಾರು ಆಸಕ್ತಿಯಿಂದ ಕಲಿಯಬೇಕು’ ಎಂದರು.</p>.<p>ಕಲಾಮಂದಿರದ ವ್ಯವಸ್ಥಾಪಕ ಆರ್.ಎಲ್.ಜಾಧವ್, ಆರ್ಯ ಈಡಿಗ ವಿದ್ಯಾರ್ಥಿ ವಸತಿ ನಿಲಯದ ಅಧ್ಯಕ್ಷ ಶ್ರೀನಾಥ, ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಯು.ರಮೇಶ್ ಮತ್ತು ಚಿತ್ರಕಲಾ ಶಿಕ್ಷಕ ಕೆ.ಬಿ.ಸಿದ್ದಲಿಂಗಪ್ಪ ಇದ್ದರು. ಮಂದಿರದ 22 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>