ಅವರದ್ದೇ ಇನ್ನೊಂದು ಕವಿತೆ ಪಾಠಶಾಲೆಯಲ್ಲ, ಪಾಕಶಾಲೆಯ ಕೆಲವು ಸಾಲುಗಳೂ ದುರಾಡಳಿತ ಮತ್ತು ವ್ಯವಸ್ಥೆಯೊಳಗಿನ ಅವಸ್ಥೆಗೆ ಕನ್ನಡಿ ಹಿಡಿಯುತ್ತಲೇ ತೀಕ್ಷಣವಾದ ವ್ಯಂಗ್ಯವನ್ನಿತ್ತರು. ಭೂಮಿ ಹೇಗಿದೆಯೆಂದರೆ ಮೊಟ್ಟೆಯಾಕಾರದಲ್ಲಿದೆ ಎನ್ನುತ್ತಾರೆ. ಮಕ್ಕಳಿಗದು ಮೊಟ್ಟೆಯ ದಿನ. ಅಕ್ಷರಗಳೆಲ್ಲವೂ ಆಹಾರಕ್ಕಾಗಿ ಸರದಿಯಲ್ಲಿ ನಿಂತಿರುವಾಗಲೇ, ಹಸಿವೆಂಬ ಮೊಗ್ಗು ಅರಳಿ, ಹೂವಾಗಿ, ಹೂವಿನ ಬೀಜಗಳಾಗಲೇ ಪ್ರಸಾರವಾಗುತ್ತಿರುವೆ. ಆಹಾರಕ್ಕೆ ವಿಷ ಬೆರೆಸಲಾಗಿದೆ.. ಆದರೂ ಮೃತವಾದ ಅಕ್ಷರಗಳಲ್ಲಿ ಕೆಲವಾದರೂ ಚಿರಂಜೀವಿಗಳಾದರೆ, ಕೆಲವು ವಾಕ್ಯ ರಚನೆಯಾಗುತ್ತದೆ ಎಂಬ ಆಶಯದೊಂದಿಗೆ ಕವಿತೆ ಮುಗಿದಾಗ, ಆಶಾಭಾವನೆಯ ಎಳೆ ಎಲ್ಲರನ್ನೂ ಹಿಡಿದಿಟ್ಟಿತು.