ನಾಗರಿಕ ಹಿತರಕ್ಷಣಾ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಕಾಸೆಟ್ಟಿ ಉಮಾಪತಿ ಸಸಿ ನೆಟ್ಟು, ವಿತರಿಸಿ, ‘ಪರಿಸರವನ್ನು ಎಂದಿಗಿಂತಲೂ ಇಂದು ಸಂರಕ್ಷಣೆ ಮಾಡುವ ತುರ್ತು ಇದೆ. ನಮ್ಮ ಸುತ್ತಮುತ್ತಲಿನ ಪರಿಸರ ಹಸಿರಾದರೆ ಮಳೆ ಬರುತ್ತದೆ. ಇಲ್ಲವಾದಲ್ಲಿ ಇಲ್ಲ. ಅನೇಕ ವರ್ಷಗಳಿಂದ ಸಸಿಗಳನ್ನು ವಿತರಿಸುತ್ತಿದ್ದೇನೆ. ಈ ಕೆಲಸ ನಿರಂತರವಾಗಿ ಮುಂದುವರೆಯಲಿದೆ. ಸಸಿ ಅಗತ್ಯವಿದ್ದವರು ಬಂದು ಉಚಿತವಾಗಿ ಪಡೆಯಬಹುದು’ ಎಂದು ಹೇಳಿದರು.