<p><strong>ಕಂಪ್ಲಿ:</strong> 'ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಮಸ್ಯೆಗಳ ಕುರಿತು ಸರ್ಕಾರದ ಗಮನಸೆಳೆಯುವುದಾಗಿ’ ಶಾಸಕ ಜೆ.ಎನ್. ಗಣೇಶ್ ಭರವಸೆ ನೀಡಿದರು.</p>.<p>ಇಲ್ಲಿನ ಮಲ್ಲಿಕಾರ್ಜುನ ಕಲ್ಯಾಣಮಂಟಪದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಭಾನುವಾರ ಹಮ್ಮಿಕೊಂಡಿದ್ದ 7ನೇ ವಾರ್ಷಿಕ ಸಮಾವೇಶ, 70ವರ್ಷ ಮೇಲ್ಪಟ್ಟ ನಿವೃತ್ತ ನೌಕರರ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ, ಎಲ್ಲ ನಿವೃತ್ತ ನೌಕರರು ಒಗ್ಗಟ್ಟಿನಿಂದ ಬೇಡಿಕೆ ಈಡೇರಿಸಿಕೊಳ್ಳುವಂತೆ ಮನವಿ ಮಾಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಎಸ್. ಗಂಗಾಧರಯ್ಯ ಮಾತನಾಡಿ, ಸರ್ಕಾರಿ ನಿವೃತ್ತ ನೌಕರರಿಗೆ ಆರೋಗ್ಯ ಸಂಜೀವಿನಿ, ಅಂತ್ಯ ಸಂಸ್ಕಾರಕ್ಕಾಗಿ ₹ 20,000 ನೀಡಬೇಕು. ಕಮ್ಯೂಟೇಷನ್ ಕಡಿತವನ್ನು 15ವರ್ಷಗಳಿಂದ 10ವರ್ಷ 8ತಿಂಗಳಿಗೆ ಇಳಿಕೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.</p>.<p>ಅಕ್ಕಿಗಿರಣಿ ಮಾಲೀಕರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಆರ್ಯವೈಶ್ಯ ಸಂಘದ ಅಧ್ಯಕ್ಷ ಡಿ.ವಿ. ಸುಬ್ಬರಾವ್, ಪುರಸಭೆ ಮಾಜಿ ಸದಸ್ಯ ಎಸ್.ಎಂ. ನಾಗರಾಜ, ವರ್ತಕರಾದ ಎಂ. ವೆಂಕಟರಮಣ, ಸಿ. ಪುಲ್ಲಯ್ಯ, ಸಂಘದ ಪದಾಧಿಕಾರಿಗಳಾದ ವಿ. ನಾರಾಯಣರೆಡ್ಡಿ, ಎ. ಗುರುಮೂರ್ತಿ, ಪಿ. ಸೋಮಪ್ಪ, ಟಿ. ಶಶಿಧರ, ವೀರೇಶಪ್ಪ, ಬೆಟ್ಟಪ್ಪ ಬಾರ್ಕೀರ್, ಬಿ. ವೀರಣ್ಣ, ಜಿಲ್ಲಾ ಸಮಿತಿ ಸದಸ್ಯರಾದ ರವೀಂದ್ರನಾಥ, ದೇವೇಂದ್ರಪ್ಪ, ಸಿ.ಎಂ. ಗಂಗಾಧರಯ್ಯ, ನೂರುಸಾಬ್, ಪದಾಧಿಕಾರಿಗಳು ಹಾಜರಿದ್ದರು.</p>
<p><strong>ಕಂಪ್ಲಿ:</strong> 'ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಮಸ್ಯೆಗಳ ಕುರಿತು ಸರ್ಕಾರದ ಗಮನಸೆಳೆಯುವುದಾಗಿ’ ಶಾಸಕ ಜೆ.ಎನ್. ಗಣೇಶ್ ಭರವಸೆ ನೀಡಿದರು.</p>.<p>ಇಲ್ಲಿನ ಮಲ್ಲಿಕಾರ್ಜುನ ಕಲ್ಯಾಣಮಂಟಪದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಭಾನುವಾರ ಹಮ್ಮಿಕೊಂಡಿದ್ದ 7ನೇ ವಾರ್ಷಿಕ ಸಮಾವೇಶ, 70ವರ್ಷ ಮೇಲ್ಪಟ್ಟ ನಿವೃತ್ತ ನೌಕರರ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ, ಎಲ್ಲ ನಿವೃತ್ತ ನೌಕರರು ಒಗ್ಗಟ್ಟಿನಿಂದ ಬೇಡಿಕೆ ಈಡೇರಿಸಿಕೊಳ್ಳುವಂತೆ ಮನವಿ ಮಾಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಎಸ್. ಗಂಗಾಧರಯ್ಯ ಮಾತನಾಡಿ, ಸರ್ಕಾರಿ ನಿವೃತ್ತ ನೌಕರರಿಗೆ ಆರೋಗ್ಯ ಸಂಜೀವಿನಿ, ಅಂತ್ಯ ಸಂಸ್ಕಾರಕ್ಕಾಗಿ ₹ 20,000 ನೀಡಬೇಕು. ಕಮ್ಯೂಟೇಷನ್ ಕಡಿತವನ್ನು 15ವರ್ಷಗಳಿಂದ 10ವರ್ಷ 8ತಿಂಗಳಿಗೆ ಇಳಿಕೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.</p>.<p>ಅಕ್ಕಿಗಿರಣಿ ಮಾಲೀಕರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಆರ್ಯವೈಶ್ಯ ಸಂಘದ ಅಧ್ಯಕ್ಷ ಡಿ.ವಿ. ಸುಬ್ಬರಾವ್, ಪುರಸಭೆ ಮಾಜಿ ಸದಸ್ಯ ಎಸ್.ಎಂ. ನಾಗರಾಜ, ವರ್ತಕರಾದ ಎಂ. ವೆಂಕಟರಮಣ, ಸಿ. ಪುಲ್ಲಯ್ಯ, ಸಂಘದ ಪದಾಧಿಕಾರಿಗಳಾದ ವಿ. ನಾರಾಯಣರೆಡ್ಡಿ, ಎ. ಗುರುಮೂರ್ತಿ, ಪಿ. ಸೋಮಪ್ಪ, ಟಿ. ಶಶಿಧರ, ವೀರೇಶಪ್ಪ, ಬೆಟ್ಟಪ್ಪ ಬಾರ್ಕೀರ್, ಬಿ. ವೀರಣ್ಣ, ಜಿಲ್ಲಾ ಸಮಿತಿ ಸದಸ್ಯರಾದ ರವೀಂದ್ರನಾಥ, ದೇವೇಂದ್ರಪ್ಪ, ಸಿ.ಎಂ. ಗಂಗಾಧರಯ್ಯ, ನೂರುಸಾಬ್, ಪದಾಧಿಕಾರಿಗಳು ಹಾಜರಿದ್ದರು.</p>