‘ಗಿನ್ನಿಸ್ ದಾಖಲೆ’ಯ ಕನಸು
ಶಂಕರ್ ಯಾದವ್ ಅವರ ನಿಸ್ವಾರ್ಥ ಸೇವೆಗೆ ರಾಯಚೂರಿನ ಬೆಳಕು ಸಂಸ್ಥೆಯಿಂದ 2023ನೇ ಸಾಲಿನ ‘ಯೋಗರತ್ನ ಪ್ರಶಸ್ತಿ’ , ಕರ್ನಾಟಕ ರಾಜ್ಯ ರೈತ ಸಂಘದಿಂದ ‘ಕಾಯಕಯೋಗಿ’ ಪ್ರಶಸ್ತಿ, ಗೋಕಾಕ್ನ ಸ್ವಾಮಿ ವಿವೇಕಾನಂದ ಯೋಗ ಸಂಸ್ಥೆ– ‘ಉತ್ತಮ ಯೋಗ ಶಿಕ್ಷಕ’ ಪ್ರಶಸ್ತಿ, ಕರ್ನಾಟಕ ರಾಜ್ಯ ರೈತ ಸಂಘ– ‘ಕಾಯಕ ಯೋಗಿ’ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ.
ಯೋಗವನ್ನೇ ಉಸಿರಾಗಿಸಿಕೊಂಡಿರುವ ಇವರು, 2022ರಲ್ಲಿ ಡಾ.ಜಗದೀಶ್ ಅವರ ಮಾರ್ಗದರ್ಶನದಲ್ಲಿ ‘ನೋಬೆಲ್ ವರ್ಲ್ಡ್ ರೆಕಾರ್ಡ್’ ಕೂಡ ದಾಖಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಯೋಗದಲ್ಲಿ ‘ಗಿನ್ನಿಸ್ ದಾಖಲೆ’ ನಿರ್ಮಿಸುವ ಕನಸು ಇವರದ್ದಾಗಿದೆ.