<p><strong>ಕುರುಗೋಡು</strong>: ಶ್ರಮಿಕ ಕುಟುಂಬದಲ್ಲಿ ಜನಿಸಿದ ಶಿವಯೋಗಿ ಸಿದ್ದರಾಮೇಶ್ವರರು ಸಮ ಸಮಾಜದ ಕನಸು ಕಂಡ ಶರಣರಲ್ಲಿ ಪ್ರಮುಖರು ಎಂದು ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್ ಅಭಿಪ್ರಾಯಪಟ್ಟರು.</p>.<p>ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕಾಯಕಯೋಗಿಗಳು ಸದಾಕಾಲ ಪೂಜಿತರಾಗಿರುತ್ತಾರೆ ಎನ್ನುವುದಕ್ಕೆ ಶಿವಯೋಗಿ ಸಿದ್ದರಾಮೇಶ್ವರರು ಉತ್ತಮ ನಿದರ್ಶನ. ಅವರ ಕಾಯಕ ತತ್ವ ಮತ್ತು ಪರೋಪಕಾರಿ ಗುಣ ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದರು.</p>.<p>ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ, ಉಪ ತಹಶೀಲ್ದಾರ್ ರಾಜಶೇಖರ್, ಶಿರಸ್ತೇದಾರ್ ವಿಜಯಕುಮಾರ್, ಕಂದಾಯ ನಿರೀಕ್ಷಕರಾದ ಸುರೇಶ್ ಮತ್ತುಭದ್ರಯ್ಯ, ಸಿಬ್ಬಂದಿ ಮಲ್ಲಮ್ಮ, ಲತಾ, ಸ್ವಾತಿ, ಶ್ವೇತಾ, ಸರಸ್ವತಿ, ರಾಜೇಶ್ವರಿ, ಭೋವಿ ಸಮಾಜದ ಮುಖಂಡರಾದ ಎರಿಸ್ವಾಮಿ, ನಟರಾಜ, ವೀರೇಶ್, ತಿಮ್ಮಪ್ಪ, ವಿ.ನಾಗರಾಜ, ದುರ್ಗಾಪ್ರಸಾದ್, ಗುರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು</strong>: ಶ್ರಮಿಕ ಕುಟುಂಬದಲ್ಲಿ ಜನಿಸಿದ ಶಿವಯೋಗಿ ಸಿದ್ದರಾಮೇಶ್ವರರು ಸಮ ಸಮಾಜದ ಕನಸು ಕಂಡ ಶರಣರಲ್ಲಿ ಪ್ರಮುಖರು ಎಂದು ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್ ಅಭಿಪ್ರಾಯಪಟ್ಟರು.</p>.<p>ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕಾಯಕಯೋಗಿಗಳು ಸದಾಕಾಲ ಪೂಜಿತರಾಗಿರುತ್ತಾರೆ ಎನ್ನುವುದಕ್ಕೆ ಶಿವಯೋಗಿ ಸಿದ್ದರಾಮೇಶ್ವರರು ಉತ್ತಮ ನಿದರ್ಶನ. ಅವರ ಕಾಯಕ ತತ್ವ ಮತ್ತು ಪರೋಪಕಾರಿ ಗುಣ ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದರು.</p>.<p>ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ, ಉಪ ತಹಶೀಲ್ದಾರ್ ರಾಜಶೇಖರ್, ಶಿರಸ್ತೇದಾರ್ ವಿಜಯಕುಮಾರ್, ಕಂದಾಯ ನಿರೀಕ್ಷಕರಾದ ಸುರೇಶ್ ಮತ್ತುಭದ್ರಯ್ಯ, ಸಿಬ್ಬಂದಿ ಮಲ್ಲಮ್ಮ, ಲತಾ, ಸ್ವಾತಿ, ಶ್ವೇತಾ, ಸರಸ್ವತಿ, ರಾಜೇಶ್ವರಿ, ಭೋವಿ ಸಮಾಜದ ಮುಖಂಡರಾದ ಎರಿಸ್ವಾಮಿ, ನಟರಾಜ, ವೀರೇಶ್, ತಿಮ್ಮಪ್ಪ, ವಿ.ನಾಗರಾಜ, ದುರ್ಗಾಪ್ರಸಾದ್, ಗುರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>