ಸಿರುಗುಪ್ಪ: ತಾಲ್ಲೂಕು ಗಂಗಾಮತಸ್ಥರ ಸಂಘದ ವತಿಯಿಂದ ಗಂಗಮಾತೆ ಜಯಂತಿ ಅಂಗವಾಗಿ ಶುಕ್ರವಾರ ಗಂಗಾ ನಗರದಿಂದ ತಾಲ್ಲೂಕು ಕ್ರೀಡಾಂಗಣದವರೆಗೂ ಗಂಗಾಮಾತೆಯ ಭಾವಚಿತ್ರದ ಮೆರವಣಿಗೆಯನ್ನು ನಡೆಸಲಾಯಿತು.
ತಾಲ್ಲೂಕಿನ ವಿವಿಧ ಗ್ರಾಮಗಳ ಗಂಗಾಮತಸ್ಥ ಮಹಿಳೆಯರು ಕಳಸ, ಪೂರ್ಣಕುಂಭ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಗಂಗಾಮತಸ್ಥರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.