<p><strong>ಸಿರುಗುಪ್ಪ</strong>: 'ಸಾಹಿತ್ಯದಲ್ಲಿ ನೋವು, ನಲಿವು ತುಮುಲಗಳ ಅಳಲು, ದಾಂಪತ್ಯ ಗೀತೆ, ಡಾಂಭಿಕೆ ಭಕ್ತಿ ಯಾವುದೇ ಇರಲಿ ಅನುಭವದ ಆಳದಿಂದ ಹೊರಹೊಮ್ಮಿದಲ್ಲಿ ಸಾಹಿತ್ಯವಾಗಲಿದೆ' ಎಂದು ನಿವೃತ್ತ ಮುಖ್ಯಗುರು ಕವಿ ಎಚ್. ಎನ್. ಪ್ರಭಾಕರ ಅಭಿಪ್ರಾಯಪಟ್ಟರು.</p><p>7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ಮಾತನಾಡಿದರು.</p><p>'ಕವಿಗಳು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಬರೆಯಬೇಕು. ಆದರೆ ಈಗ ಯುವಕರು ಮೊಬೈಲ್ ಗೀಳಿಗೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ ' ಎಂದು ಅವರು ವಿಷಾದಿಸಿದರು.</p><p>ಕವಿ ನಾಮಜಗದೀಶ 'ತನು ಕುಂಭವಾದರೆ' ಕವನ ವಾಚಿಸಿ ಗೋಷ್ಠಿಗೆ ನಾಂದಿ ಹಾಡಿದರು. ಎಚ್. ಬಿ. ಗಂಗಪ್ಪ 'ಮರುಗು' </p><p>ಕವನ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು.</p><p>ಕವಿ ಹೆಚ್. ಎಂ. ಶಿವಪ್ರಕಾಶ 'ಸಮತೆ ಸೂರ್ಯ' ಅಂಬೇಡ್ಕರ್ ಕುರಿತ ಕವನ ಚಪ್ಪಾಳೆ ಗಿಟ್ಟಿಸಿತು. ಕುರುವಳ್ಳಿ ತಿಮ್ಮಯ್ಯ ಅವರ ' ಮೋಕ್ಷದ ಹಾದಿ' ಎನ್ನುವ ಕವನ ಕಿವಿಗೊಟ್ಟು ಕೇಳಿದವರ ಮೆಚ್ಚುಗೆಗೆ ಪಾತ್ರವಾಯಿತು. ಕುಬೇರಪ್ಪ 'ಗಂಡ ಹೆಂಡತಿ ಒಳ ಜಗಳ ಹೆಂಗಿರಬೇಕು' ಹಾಸ್ಯಭರಿತ ಕವನ ವಾಚಿಸಿ ಚಪ್ಪಾಳೆ ಗಿಟ್ಟಿಸಿದರು.</p><p>ಎನ್. ನಾಗರಾಜ 'ಹೂವು ಮುಳ್ಳು' ಪದ್ಯ ಓದಿದರು. </p><p>ಕೆ. ಗಜೇಂದ್ರ, ಮಾರುತಿ ಬಲಕುಂದಿ, ಕವಿಯತ್ರಿ ಶಾರದಾ ಪತ್ತಾರ್, ಮಲ್ಲಿಕಾರ್ಜುನ, ಮಂಜುನಾಥ ಆರ್. ಪಿ, ರವಿ ಬೀಳಗಿ, ವೀರೇಶ ಕಾಲೇಕಾಯಿ 'ಆಣೆಕಟ್ಟು', ಲಕ್ಷ್ಮಣ ಎನ್. ಎಲ್. 'ಆಗಷ್ಟ್ 14' ಪದ್ಯ ಓದಿದರು. </p><p>ಮಂಜಣ್ಣ ಬಡಿಗೇರ ' ದಿನಕರ' ಷಟ್ಟದಿ ಕವನ ವಾಚಿಸಿದರು </p><p>ಬಸಮ್ಮ ಹಿರೇಮಠ 'ಜಾಗೃತರಾಗಿರಿ' ಎಂದು ವಾಚಿಸಿ ಹೆಂಗಳೆಯರನ್ನು ಎಚ್ಚರಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ</strong>: 'ಸಾಹಿತ್ಯದಲ್ಲಿ ನೋವು, ನಲಿವು ತುಮುಲಗಳ ಅಳಲು, ದಾಂಪತ್ಯ ಗೀತೆ, ಡಾಂಭಿಕೆ ಭಕ್ತಿ ಯಾವುದೇ ಇರಲಿ ಅನುಭವದ ಆಳದಿಂದ ಹೊರಹೊಮ್ಮಿದಲ್ಲಿ ಸಾಹಿತ್ಯವಾಗಲಿದೆ' ಎಂದು ನಿವೃತ್ತ ಮುಖ್ಯಗುರು ಕವಿ ಎಚ್. ಎನ್. ಪ್ರಭಾಕರ ಅಭಿಪ್ರಾಯಪಟ್ಟರು.</p><p>7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ಮಾತನಾಡಿದರು.</p><p>'ಕವಿಗಳು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಬರೆಯಬೇಕು. ಆದರೆ ಈಗ ಯುವಕರು ಮೊಬೈಲ್ ಗೀಳಿಗೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ ' ಎಂದು ಅವರು ವಿಷಾದಿಸಿದರು.</p><p>ಕವಿ ನಾಮಜಗದೀಶ 'ತನು ಕುಂಭವಾದರೆ' ಕವನ ವಾಚಿಸಿ ಗೋಷ್ಠಿಗೆ ನಾಂದಿ ಹಾಡಿದರು. ಎಚ್. ಬಿ. ಗಂಗಪ್ಪ 'ಮರುಗು' </p><p>ಕವನ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು.</p><p>ಕವಿ ಹೆಚ್. ಎಂ. ಶಿವಪ್ರಕಾಶ 'ಸಮತೆ ಸೂರ್ಯ' ಅಂಬೇಡ್ಕರ್ ಕುರಿತ ಕವನ ಚಪ್ಪಾಳೆ ಗಿಟ್ಟಿಸಿತು. ಕುರುವಳ್ಳಿ ತಿಮ್ಮಯ್ಯ ಅವರ ' ಮೋಕ್ಷದ ಹಾದಿ' ಎನ್ನುವ ಕವನ ಕಿವಿಗೊಟ್ಟು ಕೇಳಿದವರ ಮೆಚ್ಚುಗೆಗೆ ಪಾತ್ರವಾಯಿತು. ಕುಬೇರಪ್ಪ 'ಗಂಡ ಹೆಂಡತಿ ಒಳ ಜಗಳ ಹೆಂಗಿರಬೇಕು' ಹಾಸ್ಯಭರಿತ ಕವನ ವಾಚಿಸಿ ಚಪ್ಪಾಳೆ ಗಿಟ್ಟಿಸಿದರು.</p><p>ಎನ್. ನಾಗರಾಜ 'ಹೂವು ಮುಳ್ಳು' ಪದ್ಯ ಓದಿದರು. </p><p>ಕೆ. ಗಜೇಂದ್ರ, ಮಾರುತಿ ಬಲಕುಂದಿ, ಕವಿಯತ್ರಿ ಶಾರದಾ ಪತ್ತಾರ್, ಮಲ್ಲಿಕಾರ್ಜುನ, ಮಂಜುನಾಥ ಆರ್. ಪಿ, ರವಿ ಬೀಳಗಿ, ವೀರೇಶ ಕಾಲೇಕಾಯಿ 'ಆಣೆಕಟ್ಟು', ಲಕ್ಷ್ಮಣ ಎನ್. ಎಲ್. 'ಆಗಷ್ಟ್ 14' ಪದ್ಯ ಓದಿದರು. </p><p>ಮಂಜಣ್ಣ ಬಡಿಗೇರ ' ದಿನಕರ' ಷಟ್ಟದಿ ಕವನ ವಾಚಿಸಿದರು </p><p>ಬಸಮ್ಮ ಹಿರೇಮಠ 'ಜಾಗೃತರಾಗಿರಿ' ಎಂದು ವಾಚಿಸಿ ಹೆಂಗಳೆಯರನ್ನು ಎಚ್ಚರಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>