<p><strong>ತೆಕ್ಕಲಕೋಟೆ:</strong> ಸಮೀಪದ ಉಪ್ಪಾರಹೊಸಹಳ್ಳಿ ಗ್ರಾಮದ ಕೆರೆಗೆ ಬಾಗೇವಾಡಿ ಉಪಕಾಲುವೆ ಮೂಲಕ ನೀರನ್ನು ತುಂಬಿಸುವ ಕಾರ್ಯ ಭರದಿಂದ ಸಾಗಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಧ್ಯಕ್ಷರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.</p>.<p>ಈ ಕೆರೆಯಿಂದ ಉಪ್ಪಾರಹೊಸಳ್ಳಿ, ಬಲಕುಂದಿ, ಮೈಲಾಪುರ ಗ್ರಾಮದಲ್ಲಿರುವ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ಬೂದುಗುಪ್ಪ ಗ್ರಾಮದ ಕೆರೆಯನ್ನು ಸಹ ತುಂಬಿಸುವ ಕಾರ್ಯ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದೆ. ಈ ಕೆರೆ ತುಂಬಿದ ನಂತರ ಮೈಲಾಪುರ ಗ್ರಾಮದ ಕೆರೆಯನ್ನು ಎರಡು ದಿನಗಳ ಒಳಗಾಗಿ ತುಂಬಿಸಲಾಗುವುದು ಎಂದು ಬಲಕುಂದಿ ಪಿಡಿಒ ವೀರಪ್ಪ ತಿಳಿಸಿದ್ದಾರೆ.</p>.<p>ಈ ಕುರಿತಂತೆ ‘ಪ್ರಜಾವಾಣಿ’ ಮಾರ್ಚ್ 22 ರಂದು ‘ಖಾಲಿಯಾಗುತ್ತಿರುವ ಕೆರೆಗಳು: ನೀರಿನ ಬವಣೆ ಮತ್ತಷ್ಟು ತೀವ್ರ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.</p>.<div><blockquote>ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದ್ದು ಈ ಬಾರಿ ಕೆರೆ ತುಂಬಿದಲ್ಲಿ 3-4 ತಿಂಗಳು ಜನರಿಗೆ ಪೂರೈಕೆ ಮಾಡಲು ಸಾಧ್ಯವಿದೆ. ಸಾರ್ವಜನಿಕರು ನೀರಿನ ಸಮಸ್ಯೆ ಇರುವುದರಿಂದ ಹಿತಮಿತವಾಗಿ ಬಳಸಬೇಕು</blockquote><span class="attribution"> -ಬಿ. ಎಂ ಸುನೀತ ರುದ್ರಮುನಿ ಅಧ್ಯಕ್ಷೆ ಗ್ರಾಮ ಪಂಚಾಯಿತಿ ಬಲಕುಂದಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ:</strong> ಸಮೀಪದ ಉಪ್ಪಾರಹೊಸಹಳ್ಳಿ ಗ್ರಾಮದ ಕೆರೆಗೆ ಬಾಗೇವಾಡಿ ಉಪಕಾಲುವೆ ಮೂಲಕ ನೀರನ್ನು ತುಂಬಿಸುವ ಕಾರ್ಯ ಭರದಿಂದ ಸಾಗಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಧ್ಯಕ್ಷರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.</p>.<p>ಈ ಕೆರೆಯಿಂದ ಉಪ್ಪಾರಹೊಸಳ್ಳಿ, ಬಲಕುಂದಿ, ಮೈಲಾಪುರ ಗ್ರಾಮದಲ್ಲಿರುವ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ಬೂದುಗುಪ್ಪ ಗ್ರಾಮದ ಕೆರೆಯನ್ನು ಸಹ ತುಂಬಿಸುವ ಕಾರ್ಯ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದೆ. ಈ ಕೆರೆ ತುಂಬಿದ ನಂತರ ಮೈಲಾಪುರ ಗ್ರಾಮದ ಕೆರೆಯನ್ನು ಎರಡು ದಿನಗಳ ಒಳಗಾಗಿ ತುಂಬಿಸಲಾಗುವುದು ಎಂದು ಬಲಕುಂದಿ ಪಿಡಿಒ ವೀರಪ್ಪ ತಿಳಿಸಿದ್ದಾರೆ.</p>.<p>ಈ ಕುರಿತಂತೆ ‘ಪ್ರಜಾವಾಣಿ’ ಮಾರ್ಚ್ 22 ರಂದು ‘ಖಾಲಿಯಾಗುತ್ತಿರುವ ಕೆರೆಗಳು: ನೀರಿನ ಬವಣೆ ಮತ್ತಷ್ಟು ತೀವ್ರ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.</p>.<div><blockquote>ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದ್ದು ಈ ಬಾರಿ ಕೆರೆ ತುಂಬಿದಲ್ಲಿ 3-4 ತಿಂಗಳು ಜನರಿಗೆ ಪೂರೈಕೆ ಮಾಡಲು ಸಾಧ್ಯವಿದೆ. ಸಾರ್ವಜನಿಕರು ನೀರಿನ ಸಮಸ್ಯೆ ಇರುವುದರಿಂದ ಹಿತಮಿತವಾಗಿ ಬಳಸಬೇಕು</blockquote><span class="attribution"> -ಬಿ. ಎಂ ಸುನೀತ ರುದ್ರಮುನಿ ಅಧ್ಯಕ್ಷೆ ಗ್ರಾಮ ಪಂಚಾಯಿತಿ ಬಲಕುಂದಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>