<p><em><strong>ಎ.ಎಂ. ಸೋಮಶೇಖರಯ್ಯ</strong></em></p>.<p><strong>ಕೂಡ್ಲಿಗಿ:</strong> ನೂರು ಹಾಸಿಗೆಗಳ ಸೌಲಭ್ಯ ಹೊಂದಿರುವ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಯಾವ ಆಸ್ಪತ್ರೆಯಲ್ಲಿಯೂ ಮಕ್ಕಳ ವೈದ್ಯರಿಲ್ಲ.</p>.<p>ಅಪೌಷ್ಟಿಕತೆ ಕೊರತೆ ಸೇರಿದಂತೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಣ್ಣ ಪುಟ್ಟ ಕಾಯಿಲೆಗೂ ಪೋಷಕರು ತಮ್ಮ ಕೆಲಸ ಕಾರ್ಯಗಳನ್ನು ಸಾವಿರಾರು ರೂಪಾಯಿ ವ್ಯಯಿಸಿ ಹೊಸಪೇಟೆ, ಬಳ್ಳಾರಿ, ಜಗಳೂರು, ದಾವಣಗೆರೆ ಪಟ್ಟಣಗಳಿಗೆ ತೆರಳಬೇಕಾಗಿದೆ.</p>.<p>ಹೊಸಪೇಟೆ ಅಥವಾ ಬಳ್ಳಾರಿಯಂಥ ನಗರಗಳಲ್ಲಿ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಗಳಲ್ಲಿ ಟೋಕನ್ ವ್ಯವಸ್ಥೆ ಮಾಡಿಕೊಂಡಿದ್ದು, ರಾತ್ರಿ ವೇಳೆ ಕಾದು ಮುಂಗಡವಾಗಿ ಟೋಕನ್ ಪಡೆಯಬೇಕು. ರಾತ್ರಿಯೆಲ್ಲಾ ಕಾದರೂ ಟೋಕನ್ ಸಿಕ್ಕರೆ ಸಿಗಬಹುದು. ಸಿಗದೇ ಇರಬಹುದು!</p>.<p>‘ಇಲ್ಲಿ ವೈದ್ಯರಿಲ್ಲ. ನಮ್ಮ ಮಕ್ಕಳಿಗೆ ಲಸಿಕೆ, ಚುಚ್ಚುಮದ್ದಿಗಷ್ಟೇ ಬರಬೇಕು. ಇಲ್ಲವೇ ಹೊಸಪೇಟೆಗೆ ಹೋಗಬೇಕು, ಮಕ್ಕಳ ವೈದ್ಯರೊಬ್ಬನ್ನು ಕೊಡಲು ಸರ್ಕಾರಕ್ಕೆ ಆಗುವುದಿಲ್ಲವೇ’ ಎಂದು ಸಾಸಲವಾಡದ ಗೌರಮ್ಮ ಕೇಳಿದರು.</p>.<p>ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ತನ್ನ ಮಗುವಿಗೆ ಮಾಸಿಕೆ ಲಸಿಕೆ ಹಾಕಿಸಲು ಬಂದಿದ್ದ ಅವರು, ‘ಮಗು ಹುಟ್ಟಿದಾಗಿನಿಂದ ನಾವು ವೈದ್ಯರಿಗಾಗಿ ಅದೆಷ್ಟು ಬಾರಿ ಬಳ್ಳಾರಿ, ಹೊಸಪೇಟೆಗೆ ಹೋಗಿ ಬಂದೆವೋ ಲೆಕ್ಕವೇ ಇಲ್ಲ’ ಎಂದರು.</p>.<p>ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮೀಕ್ಷೆ ಪ್ರಕಾರ ತಾಲ್ಲೂಕಿನಲ್ಲಿ 3 ವರ್ಷದವರೆಗಿನ 22,108 ಮಕ್ಕಳು ಹಾಗೂ 6 ವರ್ಷದವರಗಿನ 14,157 ಮಕ್ಕಳಿದ್ದಾರೆ. ಆದರೆ ಈ ಮಕ್ಕಳಿಗೆ ಚಿಕಿತ್ಸೆ ನೀಡಲು ಒಬ್ಬ ಮಕ್ಕಳ ತಜ್ಞ ವೈದ್ಯರು ಕೂಡ ತಾಲ್ಲೂಕಿನಲ್ಲಿ ಇಲ್ಲ.<br /> ಪಟ್ಟಣದಲ್ಲಿ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ 7 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 3 ಸಮುದಾಯ ಆರೋಗ್ಯ ಕೆಂದ್ರಗಳು ತಾಲ್ಲೂಕಿನಲ್ಲಿವೆ. ಇವುಗಳಲ್ಲಿ ಒಟ್ಟು 15 ಮಂದಿ ಪದವೀಧರ ವೈದ್ಯರು, 20 ಮಂದಿ ಸ್ನಾತಕೋತ್ತರ ಪದವೀಧರ ವೈದ್ಯರು, ಹಾಗೂ 5 ದಂತ ವೈದ್ಯರ ಹುದ್ದೆಗಳಿವೆ.</p>.<p>ಆ ಪೈಕಿ ಮೂವರು ಪದವೀಧರ ವೈದ್ಯರು, ಇಬ್ಬರು ಸ್ನಾತಕೋತ್ತರ ಪದವೀಧರ ವೈದ್ಯರು ಹಾಗೂ ನಾಲ್ವರು ದಂತ ವೈದ್ಯರು ಖಾಯಂ ಇದ್ದಾರೆ. ಅವರೊಂದಿಗೆ ಹತ್ತು ವೈದ್ಯರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಎಲ್ಲಿಯೂ ಮಕ್ಕಳ ತಜ್ಞ ವೈದ್ಯರಿಲ್ಲ.<br /> ‘ಮಂಜೂರಾದ ದಿನದಿಂದ ಇಲ್ಲಿ ಮಕ್ಕಳ ವೈದ್ಯರು ಸೇವೆ ಸಲ್ಲಿಸಿರುವುದೇ ವಿರಳ. ಈ ಮೊದಲು ಇಲ್ಲಿದ್ದ ಮಕ್ಕಳ ವೈದ್ಯರೊಬ್ಬರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಹೋದ ನಂತರ ಯಾರೂ ಬಂದಿಲ್ಲ. ಸುಮಾರು ಏಳು ವರ್ಷಗಳಿಂದ ಹುದ್ದೆ ಖಾಲಿ ಉಳಿದಿದೆ.</p>.<p>ಇದರಿಂದ ತಾಲ್ಲೂಕಿನ ಆಸ್ಪತ್ರೆಗಳು ಮಕ್ಕಳಿಗೆ ಚುಚ್ಚು ಮದ್ದು, ಲಸಿಕೆ ಹಾಕುವ ಕೇಂದ್ರಗಳಾಗಿ ಮಾತ್ರ ಉಳಿದುಕೊಂಡಿವೆ. ತಾಲ್ಲೂಕಿನಲ್ಲಿ ಉತ್ತಮ ಸೇವೆ ನೀಡುವ ಖಾಸಗಿ ಆಸ್ಪತ್ರೆಗಳೂ ಇಲ್ಲದಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.</p>.<p>* * </p>.<p>ತಾಲ್ಲೂಕಿನಲ್ಲಿ ಇರುವಷ್ಟು ವೈದ್ಯರನ್ನೆ ಬಳಸಿಕೊಂಡು ಜನರಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಹೆಚ್ಚಿನ ವೈದ್ಯರ ನೇಮಕ ಮಾಡುವಂತೆ ಪ್ರಸ್ತಾವ ಕಳಿಸಲಾಗಿದೆ<br /> <strong>ಡಾ. ಷಣ್ಮುಖ ನಾಯ್ಕ್ </strong>ತಾಲ್ಲೂಕು ಆರೋಗ್ಯಧಿಕಾರಿ, ಕೂಡ್ಲಿಗಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಎ.ಎಂ. ಸೋಮಶೇಖರಯ್ಯ</strong></em></p>.<p><strong>ಕೂಡ್ಲಿಗಿ:</strong> ನೂರು ಹಾಸಿಗೆಗಳ ಸೌಲಭ್ಯ ಹೊಂದಿರುವ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಯಾವ ಆಸ್ಪತ್ರೆಯಲ್ಲಿಯೂ ಮಕ್ಕಳ ವೈದ್ಯರಿಲ್ಲ.</p>.<p>ಅಪೌಷ್ಟಿಕತೆ ಕೊರತೆ ಸೇರಿದಂತೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಣ್ಣ ಪುಟ್ಟ ಕಾಯಿಲೆಗೂ ಪೋಷಕರು ತಮ್ಮ ಕೆಲಸ ಕಾರ್ಯಗಳನ್ನು ಸಾವಿರಾರು ರೂಪಾಯಿ ವ್ಯಯಿಸಿ ಹೊಸಪೇಟೆ, ಬಳ್ಳಾರಿ, ಜಗಳೂರು, ದಾವಣಗೆರೆ ಪಟ್ಟಣಗಳಿಗೆ ತೆರಳಬೇಕಾಗಿದೆ.</p>.<p>ಹೊಸಪೇಟೆ ಅಥವಾ ಬಳ್ಳಾರಿಯಂಥ ನಗರಗಳಲ್ಲಿ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಗಳಲ್ಲಿ ಟೋಕನ್ ವ್ಯವಸ್ಥೆ ಮಾಡಿಕೊಂಡಿದ್ದು, ರಾತ್ರಿ ವೇಳೆ ಕಾದು ಮುಂಗಡವಾಗಿ ಟೋಕನ್ ಪಡೆಯಬೇಕು. ರಾತ್ರಿಯೆಲ್ಲಾ ಕಾದರೂ ಟೋಕನ್ ಸಿಕ್ಕರೆ ಸಿಗಬಹುದು. ಸಿಗದೇ ಇರಬಹುದು!</p>.<p>‘ಇಲ್ಲಿ ವೈದ್ಯರಿಲ್ಲ. ನಮ್ಮ ಮಕ್ಕಳಿಗೆ ಲಸಿಕೆ, ಚುಚ್ಚುಮದ್ದಿಗಷ್ಟೇ ಬರಬೇಕು. ಇಲ್ಲವೇ ಹೊಸಪೇಟೆಗೆ ಹೋಗಬೇಕು, ಮಕ್ಕಳ ವೈದ್ಯರೊಬ್ಬನ್ನು ಕೊಡಲು ಸರ್ಕಾರಕ್ಕೆ ಆಗುವುದಿಲ್ಲವೇ’ ಎಂದು ಸಾಸಲವಾಡದ ಗೌರಮ್ಮ ಕೇಳಿದರು.</p>.<p>ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ತನ್ನ ಮಗುವಿಗೆ ಮಾಸಿಕೆ ಲಸಿಕೆ ಹಾಕಿಸಲು ಬಂದಿದ್ದ ಅವರು, ‘ಮಗು ಹುಟ್ಟಿದಾಗಿನಿಂದ ನಾವು ವೈದ್ಯರಿಗಾಗಿ ಅದೆಷ್ಟು ಬಾರಿ ಬಳ್ಳಾರಿ, ಹೊಸಪೇಟೆಗೆ ಹೋಗಿ ಬಂದೆವೋ ಲೆಕ್ಕವೇ ಇಲ್ಲ’ ಎಂದರು.</p>.<p>ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮೀಕ್ಷೆ ಪ್ರಕಾರ ತಾಲ್ಲೂಕಿನಲ್ಲಿ 3 ವರ್ಷದವರೆಗಿನ 22,108 ಮಕ್ಕಳು ಹಾಗೂ 6 ವರ್ಷದವರಗಿನ 14,157 ಮಕ್ಕಳಿದ್ದಾರೆ. ಆದರೆ ಈ ಮಕ್ಕಳಿಗೆ ಚಿಕಿತ್ಸೆ ನೀಡಲು ಒಬ್ಬ ಮಕ್ಕಳ ತಜ್ಞ ವೈದ್ಯರು ಕೂಡ ತಾಲ್ಲೂಕಿನಲ್ಲಿ ಇಲ್ಲ.<br /> ಪಟ್ಟಣದಲ್ಲಿ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ 7 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 3 ಸಮುದಾಯ ಆರೋಗ್ಯ ಕೆಂದ್ರಗಳು ತಾಲ್ಲೂಕಿನಲ್ಲಿವೆ. ಇವುಗಳಲ್ಲಿ ಒಟ್ಟು 15 ಮಂದಿ ಪದವೀಧರ ವೈದ್ಯರು, 20 ಮಂದಿ ಸ್ನಾತಕೋತ್ತರ ಪದವೀಧರ ವೈದ್ಯರು, ಹಾಗೂ 5 ದಂತ ವೈದ್ಯರ ಹುದ್ದೆಗಳಿವೆ.</p>.<p>ಆ ಪೈಕಿ ಮೂವರು ಪದವೀಧರ ವೈದ್ಯರು, ಇಬ್ಬರು ಸ್ನಾತಕೋತ್ತರ ಪದವೀಧರ ವೈದ್ಯರು ಹಾಗೂ ನಾಲ್ವರು ದಂತ ವೈದ್ಯರು ಖಾಯಂ ಇದ್ದಾರೆ. ಅವರೊಂದಿಗೆ ಹತ್ತು ವೈದ್ಯರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಎಲ್ಲಿಯೂ ಮಕ್ಕಳ ತಜ್ಞ ವೈದ್ಯರಿಲ್ಲ.<br /> ‘ಮಂಜೂರಾದ ದಿನದಿಂದ ಇಲ್ಲಿ ಮಕ್ಕಳ ವೈದ್ಯರು ಸೇವೆ ಸಲ್ಲಿಸಿರುವುದೇ ವಿರಳ. ಈ ಮೊದಲು ಇಲ್ಲಿದ್ದ ಮಕ್ಕಳ ವೈದ್ಯರೊಬ್ಬರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಹೋದ ನಂತರ ಯಾರೂ ಬಂದಿಲ್ಲ. ಸುಮಾರು ಏಳು ವರ್ಷಗಳಿಂದ ಹುದ್ದೆ ಖಾಲಿ ಉಳಿದಿದೆ.</p>.<p>ಇದರಿಂದ ತಾಲ್ಲೂಕಿನ ಆಸ್ಪತ್ರೆಗಳು ಮಕ್ಕಳಿಗೆ ಚುಚ್ಚು ಮದ್ದು, ಲಸಿಕೆ ಹಾಕುವ ಕೇಂದ್ರಗಳಾಗಿ ಮಾತ್ರ ಉಳಿದುಕೊಂಡಿವೆ. ತಾಲ್ಲೂಕಿನಲ್ಲಿ ಉತ್ತಮ ಸೇವೆ ನೀಡುವ ಖಾಸಗಿ ಆಸ್ಪತ್ರೆಗಳೂ ಇಲ್ಲದಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.</p>.<p>* * </p>.<p>ತಾಲ್ಲೂಕಿನಲ್ಲಿ ಇರುವಷ್ಟು ವೈದ್ಯರನ್ನೆ ಬಳಸಿಕೊಂಡು ಜನರಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಹೆಚ್ಚಿನ ವೈದ್ಯರ ನೇಮಕ ಮಾಡುವಂತೆ ಪ್ರಸ್ತಾವ ಕಳಿಸಲಾಗಿದೆ<br /> <strong>ಡಾ. ಷಣ್ಮುಖ ನಾಯ್ಕ್ </strong>ತಾಲ್ಲೂಕು ಆರೋಗ್ಯಧಿಕಾರಿ, ಕೂಡ್ಲಿಗಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>