ಹೂವಿನಹಡಗಲಿ: ಇಲ್ಲಿನ ಜೆಸಿಐ ಜಾಸ್ಮಿನ್ ಮಹಿಳಾ ಘಟಕ ಮತ್ತು ರಾಜಗುರು ಪೆಟ್ರೋಲಿಯಂ ಆಶ್ರಯದಲ್ಲಿ ಮದಲಗಟ್ಟಿ ವೃತ್ತದ ಬಳಿ ಕುಡಿಯುವ ನೀರಿನ ಅರವಟಿಗೆಯನ್ನು ಸೋಮವಾರ ಪ್ರಾರಂಭಿಸಲಾಯಿತು.ಜೆಸಿಐ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಚಿನ್ ಕುರ್ತೆಕರ್ ನೀರಿನ ಅರವಂಟಿಗೆ ಉದ್ಘಾಟಿಸಿ, ‘ಇಲ್ಲಿನ ಜೆಸಿಐ ಮಹಿಳಾ ಘಟಕ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ಬಿಸಿಲಿನ ಧಗೆ ಹೆಚ್ಚಾಗಿರುವ ಸಂದರ್ಭದಲ್ಲಿ ನೀರಿನ ದಾಹ ನೀಗಿಸಿಕೊಳ್ಳಲು ತಂಪಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಜನರಿಗೆ ಅನುಕೂಲ ಆಗುವಂಥ ಸಾಮಾಜಿಕ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಸಂಘಟಿಸಬೇಕು’ ಎಂದು ಹೇಳಿದರು.
ಜೆಸಿಐ ಜಾಸ್ಮೀನ್ ಮಹಿಳಾ ಘಟಕದ ಅಧ್ಯಕ್ಷೆ ಹೇಮಾ ಕೆ.ಜೈನ್ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಘಟಕದ ಪೂರ್ವಾಧ್ಯಕ್ಷರಾದ ಭರತಕುಮಾರ್ ಚವ್ಹಾಣ್, ಡಾ.ಲಕ್ಷ್ಮಣ ಲಮಾಣಿ, ಗಾಡ್ವಿನ್ ಸುಧಾಕರ, ಜೆಸಿಐ ಮಹಿಳಾ ಘಟಕದ ಕಾರ್ಯದರ್ಶಿ ಎ.ಎಚ್.ವೈಶಾಲಿ ಹಾಗೂ ಕಿರಣಕುಮಾರ್ ಜೈನ್ ಇದ್ದರು.