<p>ಬಳ್ಳಾರಿ: ನಗರವೂ ಒಳಗೊಂಡಂತೆ ಜಿಲ್ಲೆಯ ವಿವಧೆಡೆ ಬುಧವಾರ ಭಾರಿ ಗಾಳಿಯ ಸಮೇತ ಮಳೆ ಸುರಿದಿದ್ದು, ಗಾಳಿಯ ರಭಸಕ್ಕೆ ನಗರದ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿದವು.<br /> <br /> ಸಂಜೆ 5ರ ವೇಳೆಗೆ ಬೀಸಲಾರಂಭಿಸಿದ ಭಾರಿ ಗಾಳಿಯಂದಾಗಿ ಮುಗಿಲೆತ್ತರದ ಮರಗಳು ನೆಲಕ್ಕುಳಿದವು. ಒಣಗಿದ ಟೊಂಗೆಗಳು, ತರಗೆಲೆಗಳು ಗಾಳಿಯ ರಭಸಕ್ಕೆ ಕೆಳಗೆ ಬಿದ್ದವು.<br /> <br /> ಮಳೆ ಹಾಗೂ ಬಿರುಗಾಳಿಯಿಂದಾಗಿ ಗುಡಸಲುಗಳ ಮೇಲ್ಛಾವಣಿ, ತಗಡಿನ ಹೊದಿಕೆಗಳು, ಭಾರಿ ಕಟ್ಟಡಗಳ ಮೇಲೆ ಇರಿಸಿದ್ದ ನಾಮಫಲಕಗಳು, ಅಂಗಡಿಗಳೆದುರಿನ ನಾಮಫಲಕ, ಸಣ್ಣಪುಟ್ಟ ವಸ್ತುಗಳು ಹಾರಿ ಹೋದವು. ಅಂದಾಜು ಎರಡು ಗಂಟೆಗಳ ಕಾಲ ನಗರದಲ್ಲಿ ಜನಜೀವನ ಅಸ್ವಸ್ಥಗೊಂಡಿತ್ತು.<br /> <br /> ಆಲಿಕಲ್ಲು ಮಳೆ: ತಾಲ್ಲೂಕಿನ ಕಪಗಲ್ಲು, ಸಿರಿವಾರ, ಕೊರ್ಲಗುಂದಿ, ಜಾಲಿಬೆಂಚಿ, ಮೋಕಾ, ಡಿ.ನಾಗೇನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸಂಜೆ ಭಾರಿ ಗಾಳಿ ಸಮೇತ ಸುರಿದ ಆಲಿಕಲ್ಲು ಮಳೆಯಿಂದ ತೀವ್ರ ಹಾನಿ ಸಂಭವಿಸಿದ್ದು, ಕಪಗಲ್ಲು ಗ್ರಾಮದ ಹೊರ ವಲಯದಲ್ಲಿ ಹೊನ್ನಳ್ಳಿಯ ಕುರಿಗಾರರು ತಂದಿದ್ದ 40ಕ್ಕೂ ಅಧಿಕ ಕುರಿಗಳು ಸಾವಿಗೀಡಾಗಿವೆ.<br /> <br /> ಸಂಜೆ ಇದ್ದಕ್ಕಿದ್ದಂತೆಯೇ ಸುರಿದ ಆಲಿಕಲ್ಲಿನ ಹೊಡೆತಕ್ಕೆ ಸಿಲುಕಿ 600 ಕುರಿಗಳ ಪೈಕಿ 40ಕ್ಕೂ ಹೆಚ್ಚು ಕುರಿಗಳು ಪಟಪಟನೆ ಸತ್ತು ಬಿದ್ದವು ಎಂದು ಕುರಿಗಾರ ಹೊನ್ನಳ್ಳಿ ವೀರೇಶ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.<br /> <br /> ಜತೆಗೆ ಕಪ್ಪಗಲ್ಲು ಗ್ರಾಮದ ಕುರಿಗಾರರ 4 ಕುರಿಗಳು, ಬೊಮ್ಮಘಟ್ಟದ ಕುರಿಗಾರರ 20 ಕುರಿಗಳು ಸಾವಿಗೀಡಾಗಿವೆ. ಆಲಿಕಲ್ಲುಗಳ ರಾಶಿಯು ಬೀದಿಯಲ್ಲಿ ಮುತ್ತುಗಳನ್ನು ಪೋಣಿಸಿದಂತೆ ಕಾಣಿಸುತ್ತಿತ್ತು. ರಸ್ತೆಯುದ್ದಕ್ಕೂ ಬೆಳ್ಳನೆಯ ಆಲಿಕಲ್ಲುಗಳ ಹಾಸಿಗೆಯೇ ನಿರ್ಮಾಣವಾಗಿತ್ತು ಎಂದು ಕಪ್ಪಗಲ್ಲು ಗ್ರಾಮದ ಬಳಿ ತೋಟ ಹೊಂದಿರುವ ಸಿರಿಗೇರಿ ಪನ್ನರಾಜ್ ತಿಳಿಸಿದ್ದಾರೆ.<br /> ಜಿಲ್ಲೆಯ ಸಂಡೂರು ಮತ್ತಿತರ ಕಡಗಳಲ್ಲೂ ಅಕಾಲಿಕ ಮಳೆ ಸುರಿದ ಕುರಿತು ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ: ನಗರವೂ ಒಳಗೊಂಡಂತೆ ಜಿಲ್ಲೆಯ ವಿವಧೆಡೆ ಬುಧವಾರ ಭಾರಿ ಗಾಳಿಯ ಸಮೇತ ಮಳೆ ಸುರಿದಿದ್ದು, ಗಾಳಿಯ ರಭಸಕ್ಕೆ ನಗರದ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿದವು.<br /> <br /> ಸಂಜೆ 5ರ ವೇಳೆಗೆ ಬೀಸಲಾರಂಭಿಸಿದ ಭಾರಿ ಗಾಳಿಯಂದಾಗಿ ಮುಗಿಲೆತ್ತರದ ಮರಗಳು ನೆಲಕ್ಕುಳಿದವು. ಒಣಗಿದ ಟೊಂಗೆಗಳು, ತರಗೆಲೆಗಳು ಗಾಳಿಯ ರಭಸಕ್ಕೆ ಕೆಳಗೆ ಬಿದ್ದವು.<br /> <br /> ಮಳೆ ಹಾಗೂ ಬಿರುಗಾಳಿಯಿಂದಾಗಿ ಗುಡಸಲುಗಳ ಮೇಲ್ಛಾವಣಿ, ತಗಡಿನ ಹೊದಿಕೆಗಳು, ಭಾರಿ ಕಟ್ಟಡಗಳ ಮೇಲೆ ಇರಿಸಿದ್ದ ನಾಮಫಲಕಗಳು, ಅಂಗಡಿಗಳೆದುರಿನ ನಾಮಫಲಕ, ಸಣ್ಣಪುಟ್ಟ ವಸ್ತುಗಳು ಹಾರಿ ಹೋದವು. ಅಂದಾಜು ಎರಡು ಗಂಟೆಗಳ ಕಾಲ ನಗರದಲ್ಲಿ ಜನಜೀವನ ಅಸ್ವಸ್ಥಗೊಂಡಿತ್ತು.<br /> <br /> ಆಲಿಕಲ್ಲು ಮಳೆ: ತಾಲ್ಲೂಕಿನ ಕಪಗಲ್ಲು, ಸಿರಿವಾರ, ಕೊರ್ಲಗುಂದಿ, ಜಾಲಿಬೆಂಚಿ, ಮೋಕಾ, ಡಿ.ನಾಗೇನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸಂಜೆ ಭಾರಿ ಗಾಳಿ ಸಮೇತ ಸುರಿದ ಆಲಿಕಲ್ಲು ಮಳೆಯಿಂದ ತೀವ್ರ ಹಾನಿ ಸಂಭವಿಸಿದ್ದು, ಕಪಗಲ್ಲು ಗ್ರಾಮದ ಹೊರ ವಲಯದಲ್ಲಿ ಹೊನ್ನಳ್ಳಿಯ ಕುರಿಗಾರರು ತಂದಿದ್ದ 40ಕ್ಕೂ ಅಧಿಕ ಕುರಿಗಳು ಸಾವಿಗೀಡಾಗಿವೆ.<br /> <br /> ಸಂಜೆ ಇದ್ದಕ್ಕಿದ್ದಂತೆಯೇ ಸುರಿದ ಆಲಿಕಲ್ಲಿನ ಹೊಡೆತಕ್ಕೆ ಸಿಲುಕಿ 600 ಕುರಿಗಳ ಪೈಕಿ 40ಕ್ಕೂ ಹೆಚ್ಚು ಕುರಿಗಳು ಪಟಪಟನೆ ಸತ್ತು ಬಿದ್ದವು ಎಂದು ಕುರಿಗಾರ ಹೊನ್ನಳ್ಳಿ ವೀರೇಶ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.<br /> <br /> ಜತೆಗೆ ಕಪ್ಪಗಲ್ಲು ಗ್ರಾಮದ ಕುರಿಗಾರರ 4 ಕುರಿಗಳು, ಬೊಮ್ಮಘಟ್ಟದ ಕುರಿಗಾರರ 20 ಕುರಿಗಳು ಸಾವಿಗೀಡಾಗಿವೆ. ಆಲಿಕಲ್ಲುಗಳ ರಾಶಿಯು ಬೀದಿಯಲ್ಲಿ ಮುತ್ತುಗಳನ್ನು ಪೋಣಿಸಿದಂತೆ ಕಾಣಿಸುತ್ತಿತ್ತು. ರಸ್ತೆಯುದ್ದಕ್ಕೂ ಬೆಳ್ಳನೆಯ ಆಲಿಕಲ್ಲುಗಳ ಹಾಸಿಗೆಯೇ ನಿರ್ಮಾಣವಾಗಿತ್ತು ಎಂದು ಕಪ್ಪಗಲ್ಲು ಗ್ರಾಮದ ಬಳಿ ತೋಟ ಹೊಂದಿರುವ ಸಿರಿಗೇರಿ ಪನ್ನರಾಜ್ ತಿಳಿಸಿದ್ದಾರೆ.<br /> ಜಿಲ್ಲೆಯ ಸಂಡೂರು ಮತ್ತಿತರ ಕಡಗಳಲ್ಲೂ ಅಕಾಲಿಕ ಮಳೆ ಸುರಿದ ಕುರಿತು ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>