ನೆಲಮಂಗಲದ ಬಸವಮಾಚಿದೇವ ಸ್ವಾಮೀಜಿ, ಮೂಡಬಿದರೆ ಆಂಜಿನೇಯ ಸ್ವಾಮಿ ದೇವಸ್ಥಾನದ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಅಖಿಲ ಭಾರತ ಮಡಿವಾಳರ ಸಂಘದ ಮಾಜಿ ಉಪಾಧ್ಯಕ್ಷ ಈರಣ್ಣ, ಕೆ.ವಿ. ಅಮರನಾಥ, ರಾಜ್ಯ ಸಂಘದ ಕಾರ್ಯದರ್ಶಿ ಎಚ್.ಟಿ. ರುದ್ರಪ್ಪ, ಕೆ.ವಿ. ಗೋಪಾಲ್, ನರಸಪ್ಪ, ಹುಸೇನಪ್ಪ, ಸಾಯಿಬಣ್ಣ ಮಾತನಾಡಿದರು.
ತಾ.ಪಂ. ಸದಸ್ಯೆ ಚಂದ್ರಾಯಿ ಹನುಮಂತಮ್ಮ, ಗ್ರಾ.ಪಂ. ಅಧ್ಯಕ್ಷೆ ಎನ್. ಸಣ್ಣಮ್ಮ ಬಸವರಾಜ್, ಗ್ರಾ.ಪಂ. ಉಪಾಧ್ಯಕ್ಷೆ ಎಸ್.ಎಂ. ಮಂಗಳಗೌರಿ ವಿರೂಪಾಕ್ಷಯ್ಯ, ಎ. ಬಸವರಾಜ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಆರ್. ತಿಮ್ಮಪ್ಪ, ಎ. ಲೋಕಣ್ಣ, ಎ. ಮಲ್ಲಿಕಾರ್ಜುನ, ಎ. ಮುದುಕಪ್ಪ, ಎ. ಬಸಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ 15 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಕ್ಕೂ ಮುನ್ನ ಅಲಂಕೃತ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶರಣ ಮಡಿವಾಳ ಮಾಚದೇವರ ಭಾವಚಿತ್ರ ಮತ್ತು ಮಾಚಿದೇವ ಪ್ರಭುಗಳ ಮೆರವಣಿಗೆ ಮಾಡಲಾಯಿತು.