ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, `ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿರುಗುಪ್ಪ ಕ್ಷೇತ್ರದ ಉಸ್ತುವಾರಿಯನ್ನು ತಾವೇ ಹೊತ್ತುಕೊಂಡು ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಆಗ ಗೆಲ್ಲುವುದು ಸೋಮರೆಡ್ಡಿನಾ ಅಥವಾ ಸೋಮಲಿಂಗಪ್ಪನಾ ಎಂಬುದನ್ನು ನೋಡೋಣ~ ಎಂದು ಶಾಸಕರಿಗೆ ಸವಾಲೆಸೆದರು.
ಕಂಪ್ಲಿ ಶಾಸಕ ಸುರೇಶಬಾಬು, ಬಳ್ಳಾರಿ ಮೇಯರ್ ಇಬ್ರಾಹಿಂ, ಹಳೇಕೋಟೆ ಜಿ.ಪಂ. ಸದಸ್ಯೆ ನಾಗರತ್ನಮ್ಮ, ಡಿ. ಹನುಮಂತಪ್ಪ, ಈರಮ್ಮ ಎರ್ರೆಪ್ಪ, ಜಿ. ಸಿದ್ದಪ್ಪ, ತಿಮ್ಮಪ್ಪ, ಮುಲ್ಲಾಬಾಬು, ಮೃತ್ಯುಂಜಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.