ನಗರದ ಹೊರವಲಯದ ಇರುವ ಕಚೇರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ರೈತರು ಅಲೆದಾಡಬೇಕಿದೆ. ಬೆಂಗಳೂರು ನಗರದ ಉತ್ತರಕ್ಕಿರುವ ಗ್ರಾಮಾಂತರ ಜಿಲ್ಲೆಯಿಂದ ಬೆಂಗಳೂರು ದಕ್ಷಿಣದಲ್ಲಿರುವ ಅಧೀಕ್ಷಕರ ಕಚೇರಿಗೆ ಹೋಗ
ಬೇಕೆಂದರೆ ಕನಿಷ್ಠ 75 ಕಿ.ಮೀ ಪ್ರಯಾಣಿಸಬೇಕಿದೆ. ಪ್ರಯಾಣ ದರ, ಸಮಯ, ಸಂಚಾರದ ಕಿರಿಕಿರಿ ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲ ಎನ್ನುತ್ತಾರೆ ರೈತರಾದ ಸುಧಾಕರ್, ರಾಮಣ್ಣ, ಜನೀವಾರ ಸಿದ್ಧಪ್ಪ.