ಒಂದು ಬಾರಿ ಕೇಬಲ್ ಕಳ್ಳತನವಾದರೆ ಕೊಳವೆಬಾವಿಯಿಂದ ಪಂಪ್ ಮೋಟಾರ್ ಮೇಲಕ್ಕೆತ್ತಿ ಮತ್ತೆ ಕೇಬಲ್ ಜೋಡಣೆ ಮಾಡಿ ಬಿಡಬೇಕಾದರೆ 10 ಸಾವಿರ ಖರ್ಚಾಗುತ್ತದೆ. ರೈತರು ಈ ಕೇಬಲ್ ಕಳ್ಳತನದಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಪೊಲೀಸರು ಕಳ್ಳರನ್ನು ಬಂಧಿಸಬೇಕು. ಬೀಟ್ ವ್ಯವಸ್ಥೆ ಬಿಗಿಗೊಳಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ. ಪೋಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಇನ್ನೂ ಪ್ರಕರಣ ದಾಖಲೆಯಾಗಿಲ್ಲ.