ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮೇಶ್ ಬಾಬು ಮಾತನಾಡಿ, ‘ಪಾಕಶಾಸ್ತ್ರದಲ್ಲಿ ಪದವಿ ಪಡೆದು ಪಂಚತಾರಾ ಮತ್ತು ಕಾರ್ಪೊರೇಟ್ ಕಂಪನಿಗಳಲ್ಲಿರುವ ಅಡುಗೆ ಕಾರ್ಮಿಕರು ಒಂದೆಡೆಯಾದರೆ, ಕುಟುಂಬದ ಪೊಷಣೆಗೆ ರಸ್ತೆ ಬದಿ ಪಾನಿಪುರಿ, ಗೋಬಿ ಮಂಜೂರಿ, ಅನ್ನ ಸಾಂಬಾರ್ ಮಾರಾಟ ಮಾಡಿ ಬದಕು ಕಟ್ಟಿಕೊಳ್ಳುವ ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ. 13 ವರ್ಷಗಳಿಂದ ಅನೇಕ ಬಾರಿ ಹೋರಾಟ ನಡೆಸಿದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರಿಕೆಗೆ ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿರ್ವಾಯತೆ ಇದೆ ಎಂದು ದೂರಿದರು.