ರಾಗಿ ಖರೀದಿ ಹಣ ರೈತರಿಗೆ ತಕ್ಷಣ ಬಿಡಿಗಡೆ ಮಾಡುವಂತೆ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಎಸ್.ಎ.ಶಿವರಾಜ್, ತೂಬಗೆರೆ ಹೋಬಳಿ ಅಧ್ಯಕ್ಷ ಮುನಿನಾರಾಯಣಪ್ಪ, ಕಾರ್ಯದರ್ಶಿ ರಾಜು, ಕಸಬಾ ಹೋಬಳಿ ಅಧ್ಯಕ್ಷ ಮಹಾದೇವ್, ಮುಖಂಡರಾದ ಶಿರವಾರ ರವಿ, ನಾರಾಯಣಸ್ವಾಮಿ, ಕಾಂತರಾಜು ಇದ್ದರು.