ಬ್ರಿಟೀಷರ ಕಾಲದಲ್ಲಿಯು ಕುರುಬ ಸಮುದಾಯ ಬುಡಕಟ್ಟು ಜನಾಂಗದಡಿಯಲ್ಲಿ ಎಸ್ಟಿ ಪ್ರವರ್ಗಕ್ಕೆ ಸೇರಿಸಲಾಗಿತ್ತು. ಜೇನು ಕುರುಬ, ಕಾಡು ಕುರುಬ, ಗೊಂಡ, ರಾಜಗೊಂಡ ಇವರೆಲ್ಲರೂ ಕುರುಬ ಸಮುದಾಯಕ್ಕೆ ಸೇರಿದ್ದು ಕೊಡಗು ಜಿಲ್ಲೆಯಲ್ಲಿ ಮಾತ್ರ ಎಸ್ಟಿ ಪ್ರವರ್ಗಕ್ಕೆ ಸೇರಿಸಲಾಗಿದೆ. ಇದನ್ನು 30 ಜಿಲ್ಲೆಗೂ ವಿಸ್ತರಿಸಬೇಕು. ಎಸ್ಟಿ ಪ್ರವರ್ಗ ಮೀಸಲಾತಿಯನ್ನು ಶೇ 9ಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು. ಹಾಲು ಮತ ಮಹಾ ಸಭಾ ಜಿಲ್ಲಾ ಘಟಕ ಅಧ್ಯಕ್ಷ ಎ.ರಾಮಾಂಜಿನಪ್ಪ, ತಾಲ್ಲೂಕು ಘಟಕ ಅಧ್ಯಕ್ಷ ಜಿ.ಸಿ.ಮುನಿರಾಜು, ಮುಖಂಡರಾದ ಮಂಜುನಾಥ್, ನವೀನ್ ಕುಮಾರ್, ಕೆ. ಪ್ರವೀಣ್ ಕುಮಾರ್ ಇದ್ದರು.