ಈಚೆಗೆ ಅಕ್ಕುಪೇಟೆ ಜಂಕ್ಷನ್ ನಲ್ಲಿ ಅಪಘಾತಕ್ಕೆ ಒಳಗಾಗಿದ್ದ ದ್ವಿಚಕ್ರ ವಾಹನ
ಎಚ್ಚರಿಕೆ ಫಲಕವೇ ಇಲ್ಲ ಬ್ಲಿಂಕರ್ ಇಲ್ಲ. ಇದು ರಾಷ್ಟ್ರೀಯ ಹೆದ್ದಾರಿಯೇ ಅಥವಾ ಮರಣಪಥವೇ ಅನ್ನೋ ಅನುಮಾನ ಬರುತ್ತದೆ
ಶಿಲ್ಪಾ ಸ್ಥಳೀಯ ನಿವಾಸಿ
ರಸ್ತೆ ಪ್ರಾಧಿಕಾರಕ್ಕೆ ವರದಿ
ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಡಿ.ಮುರಳೀಧರ ಅವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಚಾರ ಪೊಲೀಸ್ ಮೇಲಾಧಿಕಾರಿಗಳಿಗೆ ವಿಸ್ತೃತ ವರದಿ ಸಲ್ಲಿಸಿದ್ದಾರೆ. ಅಪಘಾತಗಳಿಗೆ ಕಾರಣವಾಗಿರುವ ತಾಂತ್ರಿಕ ದೋಷಗಳನ್ನು ತಕ್ಷಣ ಸರಿಪಡಿಸಿ ಜಂಕ್ಷನ್ನಲ್ಲಿ ರಸ್ತೆ ಸುರಕ್ಷತಾ ವ್ಯವಸ್ಥೆಗಳನ್ನು ಸುಧಾರಿಸುವಂತೆ ಅವರು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸ್ಪೀಡ್ ಬ್ರೇಕರ್ಗಳನ್ನು ವೈಜ್ಞಾನಿಕ ರಂಬಲ್ ಸ್ಟ್ರಿಪ್ ಮಾದರಿಯಲ್ಲಿ ಮರುವಿನ್ಯಾಸಗೊಳಿಸಬೇಕು. ಜಂಕ್ಷನ್ಗೆ ಕನಿಷ್ಠ 40 ಮೀಟರ್ ಮುಂಚಿತವಾಗಿ ಎಚ್ಚರಿಕೆ ಫಲಕಗಳು ಹಾಗೂ ಸೌರ ಬ್ಲಿಂಕರ್ ಅಳವಡಿಸಬೇಕು. ಜೊತೆಗೆ ಥರ್ಮೋಪ್ಲಾಸ್ಟಿಕ್ ಬಣ್ಣ ಬಳಸಿ ಸ್ಪಷ್ಟ ರಸ್ತೆ ಗುರುತು ಮಾಡಬೇಕೆಂದು ವರದಿಯಲ್ಲಿ ತಿಳಿಸಿದ್ದಾರೆ.