ಮೂರು ತಿಂಗಳಿಂದ ರಾಜಕಾಲುವೆ ಕಾಮಗಾರಿ ಸ್ಥಗಿತವಾಗಿರುವುದರಿಂದ ಕಾಲುವೆಯಲ್ಲಿ ತ್ಯಾಜ್ಯ ನೀರು ತುಂಬಿಕೊಂಡಿದೆ. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮಳೆನೀರು ಕಾಲುವೆ ಮೀರಿ ಮನೆಯೊಳಗೆ ನುಗ್ಗುತ್ತದೆ. ಇದು ದೊಡ್ಡ ಸಮಸ್ಯೆ. ಕೊಳವೆ ಬಾವಿ ಮೇಲೆ ವಿದ್ಯುತ್ ಲೈನ್ ಇದೆ. ಇದರಿಂದ ಕುಡಿಯುವ ನೀರಿಗೆ ತೊಂದರೆ ಹೇಳತೀರದು. ಸಿಮೆಂಟ್ ರಸ್ತೆಯಾಗಬೇಕು. ಚರಂಡಿ ಶುಚಿಯಾಗಬೇಕು ಎನ್ನುತ್ತಾರೆ ವಾರ್ಡಿನ ನಿವಾಸಿಗಳಾದ ಡಿ.ಸಿ.ಗೋಪಿನಾಥ್, ಮುನಿಶ್ಯಾಮಣ್ಣ, ಕುಮಾರ್.