ರಾಜ್ಯ ಸರ್ಕಾರಿ ನೌಕರರಿಗೆ ಈ ವರ್ಷದ ಜನವರಿ ಒಂದರಿಂದ ಕೊಡುತ್ತಿರುವ ತುಟ್ಟಿಭತ್ಯೆಯಲ್ಲಿನ ವ್ಯತ್ಯಾಸ ಸರಿಪಡಿಸುವಂತೆ, ಪೌರಾಡಳಿತ ಇಲಾಖೆ ನೌಕರರಿಗೂ ವೇತನ ಆಯೋಗದ ಪರಿಷ್ಕೃತ ವೇತನ ಕೊಡುವಂತೆ ಆಗ್ರಹಿಸಿದರು.
‘ನಿವೃತ್ತರೆಲ್ಲರೂ ತಪ್ಪದೇ ಸಂಘದ ಸದಸ್ಯರಾಗುವಂತೆ, ಕೇಂದ್ರ ಸಂಘವನ್ನು ಬಲಪಡಿಸುವಂತೆ ಮನವಿ ಮಾಡಿದರು. ಸದ್ಯದಲ್ಲೇ ಕೇಂದ್ರ ಸಂಘದ ಅಮೃತ ಮಹೋತ್ಸವ ನಡೆಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಕೆ.ನಾರಾಯಣಸ್ವಾಮಿ ಇದ್ದರು. ಹಿರಿಯ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.