‘ತಹಶೀಲ್ದಾರ್ ಅವರ ವರದಿಯಲ್ಲಿ ಸರ್ಜಾಪುರದ ವಿದ್ಯಾ ನಗರದ ಖಾಸಗಿ ಗೋದಾಮಿನಲ್ಲಿ ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘವು ಪಡಿತರಕ್ಕಾಗಿ ಪಡೆಯಲಾಗಿರುವ 1,879 ಕ್ವಿಂಟಲ್ ಅಕ್ಕಿಯನ್ನು ಯಾವುದೇ ಮಾಹಿತಿ ನೀಡದೆ ದಾಸ್ತಾನು ಮಾಡಲಾಗಿದೆ. ಹೆಚ್ಚುವರಿ ದಾಸ್ತಾನನ್ನು ಸ್ವೀಕರಿಸುವ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಗೋದಾಮಿನಲ್ಲಿ ಭದ್ರತೆಯಿಲ್ಲದೇ, ಸೂಚನಾ ಫಲಕವಿಲ್ಲದೇ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ತಹಶೀಲ್ದಾರ್ ಅವರು ಆಹಾರ ಇಲಾಖೆಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಈ ನೋಟಿಸ್ ಅಕ್ರಮ ಎಸಗಿರುವುದಕ್ಕೆ ಸ್ವಯಂ ವಿವರಣಾತ್ಮಕವಾಗಿದೆ. ಆದರೂ ಸಚಿವ ಗೋಪಾಲಯ್ಯ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ಚಿಟ್ ನೀಡಿದ್ದಾರೆ’ ಎಂದು ಆರೋಪಿಸಿದರು.