ಯುವ ರೈತ ಮುಖಂಡ ಮಂಜುನಾಥ್ ಮಾತನಾಡಿ, ‘ಈಗಿನ ಪರಿಸ್ಥಿತಿಯಲ್ಲಿ ದ್ರಾಕ್ಷಿ ಬೆಳೆಗಳನ್ನು ಕತ್ತರಿಸಿ ಬಿಸಾಡಿ, ಚಿಲ್ಲರೆ ಬೆಳೆಗಳನ್ನಾದರೂ ಇಡೋಣ ಎನಿಸುತ್ತಿದೆ. ಎಷ್ಟೇ ಕಷ್ಟಪಟ್ಟು ದುಡಿದರೂ ನಮ್ಮ ಕಷ್ಟಕ್ಕೆ ತಕ್ಕಷ್ಟು ಪ್ರತಿಫಲ ಸಿಗುತ್ತಿಲ್ಲ. ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಹೋದವರು, ಸಮಯಕ್ಕೆ ಸರಿಯಾಗಿ ಹಣ ಕೊಡಲ್ಲ. ನಾವು ಜೋರಾಗಿ ಮಾತನಾಡಲಿಕ್ಕೆ ನಮ್ಮ ಬಳಿಯಲ್ಲಿ ದ್ರಾಕ್ಷಿ ಕತ್ತರಿಸಿಕೊಂಡ ನಂತರ ಅವರು ಕೊಟ್ಟು ಹೋಗುವ ಒಂದು ಬಿಳಿ ಚೀಟಿ ಬಿಟ್ಟರೆ, ಬೇರೆ ದಾಖಲೆಗಳು ಇರುವುದಿಲ್ಲ. ಆದ್ದರಿಂದ ತೋಟಗಾರಿಕೆ ಸಚಿವರು ನಮ್ಮ ಬಗ್ಗೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದ್ದಾರೆ.