ಪ್ರತಿ ತಿಂಗಳ ಮೊದಲನೆಯ ಶನಿವಾರ ನಡೆಯುವ ಈ ಶಿಬಿರದಲ್ಲಿ ಸಮಾಲೋಚನೆ ಮಾಡಿ ಔಷಧಿ ನೀಡಲಾಗುತ್ತಿದೆ. ರೋಗ ಪರಿಶೀಲನೆ, ಶ್ವಾಸಕೋಶದ ಕಾರ್ಯ ಪರಿಶೀಲನೆ ಮತ್ತು ಮಹಿಳೆಯರ ಆರೋಗ್ಯಕ್ಕೆ ಚಿಕಿತ್ಸೆ ನೀಡಲಾಗುವುದು. ಶಿಬಿರದಲ್ಲಿ ಹೊಸಕೋಟೆ ನಗರ ಹಾಗೂ ಸುತ್ತಲಿನ ಜನರು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತಷ್ಟು ಜನರು ಸದುಪಯೋಗ ಪಡೆದುಕೊಂಡರೆ ಶಿಬಿರ ಯಶಸ್ವಿಯಾಗುತ್ತದೆ ಎಂದು ಸತ್ಯಸಾಯಿ ಸೇವಾ ಕೇಂದ್ರದ ಸಂಯೋಜಕರಾದ ರಾಜಗೋಪಾಲ್ ಹಾಗೂ ಧರ್ಮೆಂದ್ರ ತಿಳಿಸಿದರು.