ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ನವೀನ್ ಕುಮಾರ್, ಚಿಕ್ಕೇಗೌಡ, ಕೊರೊನಾ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪವಿಭಾಗಾಧಿಕಾರಿ ಒಂದೆರಡು ದಿನ ವರ್ಗಾವಣೆಯಾಗುವ ಮೊದಲು ಸರ್ಕಾರದ ಸಾರ್ವಜನಿಕ ಸ್ವತ್ತು ಅಕ್ರಮ ಆದೇಶ ಮಾಡಿದ್ದಾರೆ. ಇದರ ಬಗ್ಗೆ ಮೂಲ ದಾಖಲೆಗಳನ್ನು ತಿದ್ದುಪಡಿ ಮಾಡಿರುವುದು ಮತ್ತು ಆದೇಶ ಮಾಡಿರುವ ನಕಲು ಪ್ರತಿಯೊಂದಿಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಅಕ್ರಮ ಆದೇಶ ಮಾಡಿರುವ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.