ಒಂದನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದರಾಜು, ‘ಅನಾಮಧೇಯ ವ್ಯಕ್ತಿ ಕರೆಯ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿ 7ರ ರಸ್ತೆ ರಾಣಿ ಕ್ರಾಸ್ ಬಳಿ ತಪಾಸಣೆ ನಡೆಸಿದಾಗ ಲಾರಿಯಲ್ಲಿ ಸಾಗಿಸುತ್ತಿದ್ದ 20 ದೇಸಿ ನಾಟಿ ಹೋರಿಗಳು ಕಂಡುಬಂದವು. ಅದರಲ್ಲಿ ಮಾಲೀಕ ಮುನ್ವಾನ್ ಪಾಷಾ ಮತ್ತು ಚಾಲಕ ಅಮೀರ್ನನ್ನು ವಿಚಾರಣೆಗೆ ಒಳಪಡಿಸಿದಾಗ ತೆಲಂಗಾಣ ರಾಜ್ಯದ ಘಟವಾಲ ಜಿಲ್ಲೆಯಿಂದ ಬೆಂಗಳೂರು ಕಸಾಯಿಖಾನೆಗೆ ಜಾನುವಾರು ಸಾಗಾಣಿಕೆ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಯಾವುದೇ ಅಧಿಕೃತ ದಾಖಲೆ ಇಲ್ಲದ ಪರಿಣಾಮ ಪ್ರಕರಣ ದಾಖಲಿಸಿ ದೇವನಹಳ್ಳಿ ನಗರದ ಕೋಡಿಮಂಚೇನಹಳ್ಳಿಯ ಗೋಶಾಲೆಗೆ ಹೋರಿಗಳನ್ನು ಬಿಡಲಾಗಿದೆ’ ಎಂದು ಹೇಳಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.