ದೇವನಹಳ್ಳಿ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಂತರರಾಷ್ಟ್ರೀಯ ಲಯನ್ಸ್ ಕ್ಲಬ್ 317ಎಫ್ ಆಶ್ರಯದಲ್ಲಿ ಕನ್ನಡ ಬಾರದವರಿಗೆ, ಅನ್ಯಭಾಷಿಕರಿಗೆ ‘ಕನ್ನಡ ಕಲಿಯಿರಿ-ಕಲಿಸಿರಿ’ ಎಂಬ ಕಾರ್ಯಕ್ರಮವನ್ನು ಆ. 4ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ವರ್ಚುಯಲ್ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಉದ್ಘಾಟಿಸಲಿದ್ದಾರೆ. ‘ಕನ್ನಡ ಕಲಿಯಿರಿ-ಕಲಿಸಿರಿ’ ಎಂಬ ಪುಸ್ತಕವನ್ನು ಜಿ.ಪಂ. ಸಿಇಒ ಎಂ.ಆರ್. ರವಿಕುಮಾರ್ ಅವರು ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲಾ ಲಯನ್ಸ್ 317ಎಫ್ ಗೌವರ್ನರ್ ಮನೋಹರನ್ ನಂಬಿಯಾರ್ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ.