ನಗರದ ಆನಿಬೆಸೆಂಟ್ ಪಾರ್ಕ್ನಲ್ಲಿ ನಡೆದ 28ನೇ ಜಾಂಬೋರೇಟ್ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ತೊಡಗಿಸಿಕೊಂಡಿರುವ ಯು.ಟಿ.ಖಾದರ್, ‘1981ರಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಇದ್ದಾಗ ಆ ಸಂದರ್ಭದ ಕ್ಷಣಗಳತ್ತ ಜಾರಿದರು. ‘ಆನಿಬೆಸೆಂಟ್ ಪಾರ್ಕ್ನಲ್ಲಿ ನಡೆದಿದ್ದ ಜಾಂಬೋರೇಟ್ನಲ್ಲಿ ಭಾಗವಹಿಸಿದ್ದು ನನ್ನ ಪ್ರಥಮ ಕ್ಯಾಂಪ್. ನಂತರ 1985ರಲ್ಲಿ ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ನಡೆದ ರಾಷ್ಟ್ರಮಟ್ಟದ ಜಾಂಬೋರಿಯಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದೆ. 2016ರಲ್ಲಿ ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಜಾಂಬೋರಿಯಲ್ಲಿ ಸಚಿವನಾಗಿ ಭಾಗವಹಿಸಿದ್ದು, ಮಂಗಳೂರಿನ ನೆಹರೂ ಮೈದಾನದಲ್ಲಿ ಸಚಿವನಾಗಿ ರಾಷ್ಟ್ರ ಧ್ವಜ ಹಾರಿಸಿದ್ದು ಇದೆಲ್ಲ ಸಾಧ್ಯವಾಗಲು ಆತ್ಮಶಕ್ತಿ ಬೆಳೆಸಿದ್ದು’ ಸ್ಕೌಟ್ ಮತ್ತು ಗೈಡ್ಸ್ ಎಂದರು.