ದೂರವಾಣಿಯಲ್ಲಿ ಮಾತನಾಡಿದ ಪ್ರಯಾಣಿಕ ನರೇಂದ್ರ, ‘ಕರ್ನಾಟಕ ಬಂದ್ ನಡೆದಾಗ ಒಂದು ಬಾರಿ ಪ್ರತಿಭಟನೆ ವೇಳೆ ಸಿಲುಕಿ ವಿಮಾನನಿಲ್ದಾಣಕ್ಕೆ ಸಕಾಲದಲ್ಲಿ ತಲುಪದೆ ಪ್ರಯಾಣ ರದ್ದಾಗಿತ್ತು. ಮತ್ತೆ ಈ ರೀತಿ ಆದರೆ ಕಷ್ಟ ಎಂದು ಭಾವಿಸಿ ಬೆಳಗಿನ ಜಾಗ 3 ಗಂಟೆ ಬಂದು ಕುಳಿತುಕೊಂಡಿದ್ದೇನೆ. ನೂರಾರು ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗವಿಲ್ಲ, ಗುರುವಾರ ಮಧ್ಯಾನ್ನ 3ಕ್ಕೆ ದೆಹಲಿಗೆ ಟಿಕೆಟ್ ಕಾಯ್ದಿರಿಸಿದ್ದೇನೆ’ ಎಂದು ಹೇಳಿದರು.