ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಅತ್ತಿಬೆಲೆ ಸಮೀಪದ ಬಿದರಗುಪ್ಪೆ ಕೆರೆಯ ಬಳಿ ಆರೋಪಿಯು ಗಾಂಜಾ ಸಾಗಿಸುತ್ತಿದ್ದುದ್ದು ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಲು ಮುಂದಾದಾಗ ಆರೋಪಿಯು ಚಾಕುವಿನಿಂದ ಸರ್ಜಾಪುರ ಪಿಎಸ್ಐ ಹರೀಶ್ ರೆಡ್ಡಿ ಅವರ ಬಲಗೈಗೆ ತಿವಿದು ಪರಾರಿಯಾಗಲು ಯತ್ನಿಸಿದ. ತಡೆಯಲು ಯತ್ನಿಸಿದ ಅತ್ತಿಬೆಲೆ ಸಬ್ಇನ್ಸ್ಪೆಕ್ಟರ್ ಮುರಳಿ ಮತ್ತು ಹೆಡ್ಕಾನ್ಸ್ಟೇಬಲ್ ರವಿಕುಮಾರ್ ಅವರ ಮೇಲೂ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಅವರ ಮೇಲೂ ದಾಳಿ ನಡೆಸಲು ಮುಂದಾದಾಗ ಸತೀಶ್ ಅವರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಆರೋಪಿಯು ಓಡಿಹೋಗಲು ಯತ್ನಿಸಿದಾಗ ಅಯೂಬ್ ಖಾನ್ನ ಕಾಲಿಗೆ ಗುಂಡು ಹೊಡೆದಿದ್ದಾರೆ. ಆರೋಪಿಯು ಗಾಯಗೊಂಡಿದ್ದು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.